ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಮಾವ!
Views: 132
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನ ಮೇಲ್ಲೆ ಮಾವನ ಮನೆಯವರು ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಯುವಕನ ಹೆಸರು ಸಾಯಿ ಚಂದ್, ಇದೇ ಜಿಲ್ಲೆಯ ಮಂಡವಳ್ಳಿ ಮಂಡಲದ ಕಾರು ಕೊಲ್ಲಿ ಗ್ರಾಮದವನು. ಸಾಯಿ ದುರ್ಗಾ ಇಬ್ಬರೂ 8 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ಸಾಯಿ ದುರ್ಗಾ ಅವರ ಕುಟುಂಬ ಸಾಯಿ ಚಂದ್ ಅವರನ್ನು ಒಪ್ಪದ ಕಾರಣ ಈ ಜೋಡಿ ಪೊಲೀಸ್ ರಕ್ಷಣೆ ಕೋರಿ ಏಲೂರಿನ ಗಂಗಮ್ಮ ದೇವಾಲಯದಲ್ಲಿ ಕೆಲವು ದಿನಗಳ ಹಿಂದೆ ಮದುವೆಯಾದರು.
ಸಾಯಿ ಚಂದ್ ಅವರ ಪೋಷಕರು ಮದುವೆಗೆ ಹಾಜರಿದ್ದರೆ, ಸಾಯಿ ದುರ್ಗಾ ಅವರ ಕುಟುಂಬ ಹಾಜರಾಗಿರಲಿಲ್ಲ. ಮದುವೆಯ ನಂತರ ಸಾಯಿ ಚಂದ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಾಕಿದ್ದ. ಇದನ್ನು ನೋಡಿದ ಸಾಯಿ ದುರ್ಗಾ ಅವರ ಪೋಷಕರು ಮತ್ತು ಸಂಬಂಧಿಕರು ಕೋಪಗೊಂಡು ರಮಣಕ್ಕಪೇಟ ಗ್ರಾಮಕ್ಕೆ ಬಂದು ಸಾಯಿ ಚಂದ್ ಅವರನ್ನು ಹುಡುಕಿ, ಅವನನ್ನು ಕೂದಲು ಹಿಡಿದು ಎಳೆದೊಯ್ದು ವಿದ್ಯುತ್ ಕಂಬಕ್ಕೆ ಕಟ್ಟಿ, ಚಪ್ಪಲಿ-ಕೈಗಳಿಂದ ಹೊಡೆದು, ಕಲ್ಲುಗಳನ್ನು ಎಸೆದು ಗಾಯಗೊಳಿಸಿದರು. ಈ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿ ವೈರಲ್ ಆಗಿದೆ.
ಈ ಹಲ್ಲೆಯಿಂದ ಸಾಯಿ ಚಂದ್ ಗಂಭೀರ ಗಾಯಗಳಾಗಿವೆ. ಸಾಯಿ ದುರ್ಗಾ ಅವರನ್ನು ಆಕೆಯ ಕುಟುಂಬ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದಿದೆ ಎಂಬ ಆರೋಪವೂ ಇದೆ. ಘಟನೆಯ ಬಳಿಕ ಸಾಯಿ ಚಂದ್ ಪೊಲೀಸರಿಗೆ ದೂರು ನೀಡಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಎಸ್ಪಿ ಶಿವ ಪ್ರತಾಪ್ ಕಿಶೋರ್ ಅವರು ತನಿಖೆ ನಡೆಸುತ್ತಿದ್ದು, ದಂಪತಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.






