ಕರಾವಳಿ

ಉಪ್ಪುಂದ :ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

Views: 217

ಉಪ್ಪುಂದ: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪುಂದ ಸಮೀಪ ಹೆರಂಜಾಲಿನಲ್ಲಿ ನಡೆದಿದೆ.

ಮಹಿಳೆಯ ತಂದೆ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ತಾಲೂಕು ಚಾಂತಾರು ಸದಾಶಿವ ಅವರ ಪುತ್ರಿ ವಿನೋದ ಆತ್ಮಹತ್ಯೆ ಮಾಡಿಕೊಂಡವರು.

ವಿನೋದಳನ್ನು ಸುಮಾರು 18 ವರ್ಷಗಳ ಹಿಂದೆ ಹೆರಂಜಾಲು ಗ್ರಾಮದ ಚಿಕ್ಕಯ್ಯ ಎಂಬುವವರ ಪುತ್ರ ಪಾಂಡುರಂಗ ಅವರಿಗೆ ಮದುವೆ ಮಾಡಿಕೊಡಲಾಗಿತ್ತು, ಗಂಡ ಮುಂಬೈಯಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಅವಳು ತನ್ನ 8 ವರ್ಷದ ಗಂಡು ಮಗುವಿನೊಂದಿಗೆ ಹೆರಂಜಾಲು ಮನೆಯಲ್ಲಿ ಅತ್ತೆ ಜಲಜಾ ಹಾಗೂ ಅತ್ತಿಗೆ ಅಂಬಿಕಾ ಜೊತೆ ವಾಸವಾಗಿದ್ದು, ವಿನೋದಾಳಿಗೆ ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಗಂಡನ ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button