ಇತರೆ

ಸರ್ಕಾರಿ ಬಸ್, ಜೀಪ್ ನಡುವೆ ಭೀಕರ ಅಪಘಾತ   ನಾಲ್ವರು ಸ್ಥಳದಲ್ಲೇ ಸಾವು 

Views: 79

ಮೈಸೂರು: KSRTC ಬಸ್, ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ RTO ಕಚೇರಿ ಬಳಿ ನಡೆದಿದೆ. ರಾಜೇಶ್, ಲೋಕೇಶ್, ಸೋಮೇಶ್ ಮತ್ತು ಕಾರು ಚಾಲಕ ಸಾವನ್ನಪ್ಪಿದ್ದಾರೆ.

ಸಾರಿಗೆ ಬಸ್​ ವಿರಾಜಪೇಟೆಯಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಅತ್ತ ಜೀಪ್​ನಲ್ಲಿದ್ದವರು ಶುಂಠಿ ಕೀಳಲು ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಮೃತರು ಅಂತರಸಂತೆ ಜಿ.ಆರ್.ಕಾಲೋನಿ ನಿವಾಸಿಗಳಾಗಿದ್ದು, ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button