ರಾಜಕೀಯ

ರಾಜ್ಯಸಭೆ ಚುನಾವಣೆ:ಕಾಂಗ್ರೆಸ್‌ ರಾಜ್ಯದಿಂದ ಯಾರ್​ ಯಾರ ಹೆಸರು ಘೋಷಣೆ ಮಾಡಿದೆ?

Views: 93

ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೆನ್ನಲ್ಲೇ ಕಾಂಗ್ರೆಸ್​ ಕರ್ನಾಟಕದಿಂದ ಮೂವರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಸೈಯ್ಯದ್​​ ನಾಸೀರ್ ಹುಸೇನ್, ಜಿ.ಸಿ ಚಂದ್ರಶೇಖರ್​ ಹಾಗೂ ಅಜಯ್ ಮಾಕನ್​ಗೆ ಈ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಈಗಾಗಲೇ ಬಿಜೆಪಿ ರಾಜ್ಯಸಭೆ ಎಲೆಕ್ಷನ್​​ಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸದ್ಯ ಕಾಂಗ್ರೆಸ್​ ಕೂಡ ಮೂವರ ಹೆಸರುಗಳನ್ನು ಅನೌನ್ಸ್ ಮಾಡಿದೆ.

ಡಾಕ್ಟರ್ ಎಲ್​ ಹನುಮಂತಯ್ಯ, ಬಿ.ಎಲ್ ಶಂಕರ್‌, ಎಂ.ಸಿ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಈ ಮೂವರನ್ನ ಬಿಟ್ಟು ಬೇರೆ ಅಭ್ಯರ್ಥಿಗಳಿ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಎಲ್​ ಹನುಮಂತಯ್ಯ, ಬಿ.ಎಲ್ ಶಂಕರ್‌, ಎಂ.ಸಿ ವೇಣುಗೋಪಾಲ್ ಅವರಿಗೆ ದೊಡ್ಡ ನಿರಾಸೆ ಆಗಿದೆ.

Related Articles

Back to top button