ರಾಜ್ಯಸಭಾ ಚುನಾವಣೆ ಲೆಕ್ಕಾಚಾರ ಕುತೂಹಲ..! ಕಾಂಗ್ರೆಸ್ಗೆ ಮತ್ತೊಂದು ಆಘಾತ..! ಕುದುರೆ ವ್ಯಾಪಾರ ಭೀತಿ…

Views: 63
ಇದೇ ಫೆಬ್ರವರಿ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದ್ರೆ, ಕಣದಲ್ಲಿ ಐದನೇ ಅಭ್ಯರ್ಥಿ ಇರುವುದರಿಂದ ಸಹಜವಾಗಿಯೇ ಆಡಳಿತರೂಢ ಕಾಂಗ್ರೆಸ್ಗೆ ಕುದುರೆ ವ್ಯಾಪಾರ ಭೀತಿ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಸಂಖ್ಯಾಬಲದಲ್ಲಿ ಯಾವುದೇ ಕಡಿಮೆಯಾಗದಂತೆ ಶಾಸಕರನ್ನು ಹಿಡಿಟ್ಟುಕೊಳ್ಳಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಂದು ಮತ ಕಳೆದುಕೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಮೊದಲೇ ಅಡ್ಡಮತದಾನದ ಭೀತಿಯಲ್ಲಿದ್ದ ಕಾಂಗ್ರೆಸ್ಗೆ ಮತ್ತೊಂದು ಆಘಾತವಾಗಿದೆ
.ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದ್ದು ಐವರು ಕಣದಲ್ಲಿ ಇರುವುದರಿಂದ ಈಗ ಈ ಚುನಾವಣೆ ಕುತೂಹಲಕಾರಿ ಘಟ್ಟ ತಲುಪಿದೆ. ಕಾಂಗ್ರೆಸ್ನಿಂದ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್, ಡಾ. ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ. ಆದ್ರೆ, ಕುಪೇಂದ್ರ ರೆಡ್ಡಿಗೆ ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ.
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್ನ ಎಲ್ಲ 135 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಿದ್ದರು. ಆದ್ರೆ, ಇದೀಗ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಒಂದು ಮತ ಕಡಿಮೆಯಾಗಿದೆ. ಈ ಮೂಲಕ ಕಾಂಗ್ರೆಸ್ ಮತಗಳು 135ರಿಂದ 134ಕ್ಕೆ ಇಳಿದಿದೆ. ಹೀಗಾಗಿ ಕಾಂಗ್ರೆಸ್ನ ಮೂರನೇ ಅಭ್ಯರ್ಥಿಗೆ ಒಂದು ಮತ ಕೊರತೆಯಾಗಿದೆ. ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್ನಲ್ಲಿ ಈಗ 135 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ನ ಎಲ್ಲಾ ಶಾಸಕರು ಯಾವುದೇ ಅಡ್ಡ ಮತದಾನ ಮಾಡದೆ ಮತ ಹಾಕಿದರೆ ತಲಾ 45 ಮತಗಳು ಬೀಳುವುದರಿಂದ ಮೂವರು ಗೆಲುವು ಸಾಧಿಸುತ್ತಿದ್ದರು. ಈಗ ಒಂದು ಮತ ಕಡಿಮೆಯಾಗಿದ್ದರಿಂದ ಕಾಂಗ್ರೆಸ್ಗೆ ಟೆನ್ಷನ್ ಶುರುವಾಗಿದೆ.
ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ಒಂದು ಮತ ಕಾಂಗ್ರೆಸ್ ಕಳೆದುಕೊಂಡಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವೆಂಕಟಪ್ಪ ಸಾವಿಗೂ ಮೊದಲೇ ಅವರಿಂದ ರಾಜ್ಯಸಭಾ ಚುನಾವಣೆ ಫಾರಂಗೆ ಸಹಿ ಹಾಕಿಸಿಕೊಂಡಿದ್ದಾರಂತೆ. ಹೀಗಾಗಿ ಅವರ ಮತ ಸ್ವೀಕೃತವಾಗಬಹುದು. ಇಲ್ಲ ಮತದಾನದ ಲೆಕ್ಕಾಚಾರ ಬದಲಾಗಬಹುದು. ಈ ಬಗ್ಗೆ ಚುನಾವಣೆ ಆಯೋಗ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು 135 ಬೇಕು. ಹೀಗಾಗಿ ಕಡಿಮೆಯಾಗುವ ಒಂದು ಮತವನ್ನು ಪಕ್ಷೇತರ ಮೂಲಕ ಹಾಕಿಸುವ ಆಪ್ಷನ್ ಕಾಂಗ್ರೆಸ್ ಮುಂದಿದೆ. ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣಯ್ಯ ಸೇರಿದಂತೆ ಮೂವರು ಪಕ್ಷೇತರ ಶಾಸಕರಿದ್ದು, ಇವರಲ್ಲಿ ಒಂದು ಮತ ಸೆಳೆದು ಪಕ್ಷದ ಎಲ್ಲಾ ಶಾಸಕರು ಸರಿಯಾಗಿ ಮತದಾನ ಮಾಡಿದರೆ ಸಾಕು ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಬಹುದು.
ಇಷ್ಟಕ್ಕೆ ಸುಮ್ಮನಿರದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಆಪರೇಷನ್ಗೆ ರಿವರ್ಸ್ ಆಪರೇಷನ್ ಮಾಡುವ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಕೆಲ ಶಾಸಕ ಮತ ಸೆಳೆಯಲು ಮೈತ್ರಿ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮೇಲೆ ಕಟ್ಟಿದ್ದಾರೆ. ಇನ್ನು ಜೆಡಿಎಸ್ನ ಶರಣಗೌಡ ಕಂದಕೂರು ಅವರಿಗೂ ಗಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸುಲಭವಾಗಿ ಜಯ ಸಾಧಿಸಿಬೇಕೆದ್ದ ಕಾಂಗ್ರೆಸ್ ಮೂವರು ಅಭ್ಯರ್ಥಿಗಳ ಪೈಕಿ ಮೂರನೇ ಅಭ್ಯರ್ಥಿ ಒಂದು ಮತ ಕಡಿಮೆಯಾಗಲಿದ್ದು, ರಾಜ್ಯಸಭಾ ಚುನಾವಣೆ ಲೆಕ್ಕಾಚಾರ ಕುತೂಹಲ ಮೂಡಿಸಿದೆ.