ಜನಮನ

ಮಧ್ಯ ರಾತ್ರಿ ಮಹಿಳೆಯರ ಸುರಕ್ಷತೆ ಅರಿಯುವ ಕಾರ್ಯಾಚರಣೆ..ಐಪಿಎಸ್ ಅಧಿಕಾರಿಗೆ ಅಶ್ಲೀಲ ವರ್ತನೆ, 40 ಮಂದಿ ಪೊಲೀಸರ ವಶಕ್ಕೆ 

Views: 188

ಕನ್ನಡ ಕರಾವಳಿ ಸುದ್ದಿ:ಮಹಿಳೆಯರ ಸುರಕ್ಷತೆಯ ನೈಜ ಸ್ಥಿತಿಯನ್ನು ಅರಿಯಲು ಹೈದರಾಬಾದ್ ನಗರದ ದಿಲ್ಲುಮ್‌ನಗರ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಮಲ್ಕಾಜ್ ಗಿರಿ ಪೊಲೀಸ್ ಆಯುಕ್ತ ಸುಮತಿ ಅವರಿಗೆ ಕೆಲವರು ಕಿರುಕುಳ ನೀಡಿದ ಘಟನೆ ನಡೆದಿದೆ.

ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3.30ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಸುಮತಿ ಅವರು ಸಾಮಾನ್ಯ ಉಡುಪಿನಲ್ಲಿ ನಗರದಲ್ಲಿನ ಮಹಿಳಾ ಸುರಕ್ಷತಾ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದರು. ಈ ವೇಳೆ, ತಾವು ಪೊಲೀಸ್ ಅಧಿಕಾರಿಯ ಜೊತೆ ‘ಕೇಳುತ್ತಿದ್ದೇವೆ’ ಎಂದು ತಿಳಿಯದ ಕೆಲವರು ಅವರ ಬಳಿ ಬಂದು ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀವು ಬರುತ್ತೀರಾ?’ ಮತ್ತು ‘ದರ ಎಷ್ಟು?’ ಎಂಬ ರೀತಿಯ ಅವಹೇಳನಕಾರಿ ಮಾತುಗಳನ್ನಾಡಿ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಘಟನೆಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕಿರುಕುಳ ನೀಡಿದವರನ್ನು ಸೇರಿಸಿ ಒಟ್ಟು 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ವಶಕ್ಕೆ ಪಡೆದವರ ಪೈಕಿ ಬಹುತೇಕರು ವಿದ್ಯಾರ್ಥಿಗಳು ಹಾಗೂ ದಿನಗೂಲಿ ನೌಕರರು ಎಂದು ತಿಳಿದು ಬಂದಿದೆ. ಹಲವರು ಗಾಂಜಾ ಸೇವನೆಯ ಪ್ರಭಾವದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ ಕೌನ್ಸೆಲಿಂಗ್‌ ನಡೆಸಲಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಹೈದರಾಬಾದ್‌ನಲ್ಲಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮಹಿಳೆಯರ ಸುರಕ್ಷತೆ ಕುರಿತಂತೆ ಮತ್ತೆ ಆತಂಕ ಹುಟ್ಟಿಸಿದೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಎದುರಿಸುವ ನೈಜ ಪರಿಸ್ಥಿತಿಯನ್ನು ಅರಿಯುವ ಉದ್ದೇಶದಿಂದಲೇ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Related Articles

Back to top button
error: Content is protected !!