ಸಾಮಾಜಿಕ

ಮಂದಾರ್ತಿ 23ನೇ ವರ್ಷದ ಸಾಮೂಹಿಕ ವಿವಾಹ: 42 ಜೋಡಿ ಹಸೆಮಣೆಗೆ

Views: 47

ಕನ್ನಡ ಕರಾವಳಿ ಸುದ್ದಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ 23ನೇ ವರ್ಷದ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ಜರಗಿತು.

ಉಡುಪಿ ಜಿಲ್ಲೆಯ 36, ಶಿವಮೊಗ್ಗದ 4, ಚಿಕ್ಕಮಗಳೂರಿನ 2 ಜೋಡಿ ಸೇರಿದಂತೆ ಒಟ್ಟು 42 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಧುವಿಗೆ ಕರಿಮಣಿ ಸರ, ಧಾರೆ ಸೀರೆ, ಹೂವಿನ ಹಾರ ಮತ್ತು ವರನಿಗೆ ಕುರ್ತಾ ಪೈಜಾಮ ಹಾಗೂ ಹೂವಿನ ಹಾರ ವನ್ನು ದೇವಳದ ವತಿಯಿಂದ ನೀಡಲಾ ಯಿತು. ವೇ|ಮೂ। ಶ್ರೀಪತಿ ಅಡಿಗ ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ ಧಾರ್ಮಿಕ ವಿಧಾನ ನೆರವೇರಿತು.

ಆಡಳಿತ ಮಂಡಳಿಯ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಲಿ, ಅನುವಂಶಿಕ ಮೊಕ್ತೇಸರ ಎಚ್ .ಪ್ರಭಾಕರ ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ ಎಚ್. ಶಂಭು ಶೆಟ್ಟಿ ಜಯರಾಮ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಶೇಡಿ ಕೊಡ್ಲು ವಿಠಲ್ ಶೆಟ್ಟಿ, ಭಾಸ್ಕರ ಶೆಟ್ಟಿ,  ಶೇಡಿಕೊಡ್ಲು ಕೆ.ಗಣಪಯ್ಯ ಶೆಟ್ಟಿ, ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷ ರಾಮಕೃಷ್ಣ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮೇಲ್ವಿಚಾರಕಿ ಮಾಲತಿ ಶೆಟ್ಟಿ ಗ್ರಾಮ ಆಡಳಿತಾಧಿಕಾರಿ ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದೇವಳದ ಸಿಬಂದಿ, ವಧು ವರರ ಕಡೆಯವರು, ಭಕ್ತರು ಪಾಲ್ಗೊಂಡರು. ಎಂಜಿನಿಯರ್ ಪ್ರದೀಪ್ ಶೆಟ್ಟಿ ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು. ಇದುವರೆಗಿನ 23 ವರ್ಷದಲ್ಲಿ ಒಟ್ಟು 733 ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.

 

Related Articles

Back to top button