ಇತರೆ
ಬೈಂದೂರು: ಬಾವಿ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ವ್ಯಕ್ತಿ ಸಾವು

Views: 73
ಕನ್ನಡ ಕರಾವಳಿ ಸುದ್ದಿ: ಬಾವಿ ಕೆಲಸ ಮಾಡುವ ವೇಳೆ ಮೈಮೇಲೆ ಮಣ್ಣು ಕುಸಿದು ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿರೂರು ಗ್ರಾಮದ ದೊಂಬೆ ಕೆಳಪೇಟೆಯಲ್ಲಿ ಸಂಭವಿಸಿದೆ.
ಬವಳಾಡಿ ಗ್ರಾಮದ ನಿವಾಸಿ ಸಂತೋಷ (26) ಮೃತಪಟ್ಟವರು.
ಬಾವಿಯ ಒಳಗಡೆ ಕೆಲಸ ಮಾಡುತ್ತಿದಾಗ ಮಣ್ಣು ಆಕಸ್ಮಿಕವಾಗಿ ಕುಸಿದು ಸಂತೋಷನ ಮೈಮೇಲೆ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.