ರಾಜಕೀಯ

ಬಿಜೆಪಿ ಸಭೆಯಲ್ಲಿ ಗದ್ದಲ, ಆಕ್ರೋಶ: ಗೋ ಬ್ಯಾಕ್ ಶೋಭಾ ಚಳುವಳಿ ತೀವ್ರ

Views: 77

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ತೀವ್ರಗೊಂಡಿದ್ದು, ಕಾರ್ಯಕರ್ತರು ಪಕ್ಷದ ಕಚೇರಿ ಗದ್ಧಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ‌ನಿರ್ವಹಣಾ ಸಮಿತಿ ಸಭೆ ಭಾನುವಾರ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ಈ ವೇಳೆ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ‘ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಮಾಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಹತ್ತು ವರ್ಷಗಳಿಂದ ಸಂಸದೆಯಾಗಿರುವ ಶೋಭಾ ಅವರಿಗೆ ಪಕ್ಷದ ಬ್ಲಾಕ್ ಸಮಿತಿ ಮುಖಂಡರ ಪರಿಚಯವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಬಂದ ಸಿ.ಟಿ.ರವಿ, ‘ನಮ್ಮ ವೈಮಸ್ಸಿನಿಂದ ದೇಶಕ್ಕೆ ಆಪತ್ತು ಬರಬಾರದು. ಯಾರೇ ಅಭ್ಯರ್ಥಿಯಾದರೂ ಮೋದಿಯವರೇ ಅಭ್ಯರ್ಥಿ ಎಂದು ಭಾವಿಸಿ’ ಎಂದು ಮನವಿ ಮಾಡಿದರು

ಚಿಕ್ಕಮಗಳೂರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದು, ಅವರಿಗೆ ಬಿಟ್ಟು ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಮಾಜಿ ಸಚಿವ ಸಿ.ಟಿ. ರವಿ ಸೋಲಿಗೆ ಶೋಭಾ ಅವರೇ ಕಾರಣ ಎಂಬುದು ಕಾರ್ಯಕರ್ತರ ಆಕ್ರೋಶವಾಗಿದೆ. ಹೀಗಾಗಿ ಗೋಬ್ಯಾಕ್‌ ಅಭಿಯಾನ ಮಾಡುತ್ತಿದ್ದು, ಗೋ ಬ್ಯಾಕ್ ಶೋಭಾ ಬಿಜೆಪಿ ಉಳಿಸಿ ಎಂಬ ಕೂಗು ಜೋರಾಗಿದೆ.

ಬಿಜೆಪಿ ಮುಖಂಡ ಅನಿಲ್ ಮಾತನಾಡಿ, ಇಲ್ಲಿನ ಜನರಿಗೆ ಬಿಜೆಪಿ ಉಸ್ತುವಾರಿ ಯಾರೆಂದು ಗೊತ್ತಿಲ್ಲ ಸ್ಥಳೀಯ ಬಿಜೆಪಿ ನಾಯಕರ ಪರಿಚಯವೇ ಇಲ್ಲದ ಶೋಭಾಗೆ ಟಿಕೆಟ್ ಕೊಡಬೇಡಿ ಎಂದರು.

 

 

 

 

 

 

Related Articles

Back to top button