ಯುವಜನ

ಟೀಚರ್ ಬೈಯ್ದಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ 

Views: 205

ಕನ್ನಡ ಕರಾವಳಿ ಸುದ್ದಿ:ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ  ಟೀಚರ್ ನನಗೆ ಬೈಯ್ದಿದ್ದಾರೆ ಎಂದು ಡೆತ್‌ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ವಿವೇಕ್ ಮಹದೇವ್ ರಾವುತ್ (15) ಮೃತ ವಿದ್ಯಾರ್ಥಿ. ಈತ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಜೈ ಬಜರಂಗ್ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ವಿವೇಕ್ ತರಗತಿಯಲ್ಲಿದ್ದಾಗ ಸೂರ್ಯವಂಶಿ ಎನ್ನುವ ಶಿಕ್ಷಕ ಪಠ್ಯದ ಸಂಬಂಧ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಟೀಚರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ಇದ್ದಾಗ, ಸೂರ್ಯವಂಶಿ ಅವರು ವಿವೇಕ್‌ಗೆ ಗದರಿದ್ದಾರೆ. ನಿನ್ನ ಅಪ್ಪ-ಅಮ್ಮನ ಬಳಿ ನೀನು ಕಲಿಯುವುದಿಲ್ಲ ಅಂಥ ದೂರು ಕೊಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿದ ಸಹ ವಿದ್ಯಾರ್ಥಿಗಳು ತಮಾಷೆ ಮಾಡಿದ್ದಾರೆ. ಇದು ವೀವೆಕ್‌ಗೆ ಅವಮಾನದ ರೀತಿಯಾಗಿದೆ. ಶಿಕ್ಷಕರು ಬೈಯ್ದ ಪರಿಣಾಮ ಮನನೊಂದಿದ್ದ ವಿವೇಕ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವ ಮುನ್ನ ವಿವೇಕ್ ಪತ್ರವೊಂದನ್ನು ಬರೆದಿದ್ದು, ಇದರಲ್ಲಿ ಸೂರ್ಯವಂಶಿ ಅವರ ಹೆಸರು ಬರೆದಿದ್ದಾನೆ.”ನಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ… ಸೂರ್ಯವಂಶಿ ಟೀಚರ್ ನನಗೆ ಬೈಯ್ದಿದ್ದಾರೆ. ನನ್ನ ಹೆತ್ತವರ ಬಗ್ಗೆ ಮಾತನಾಡಿದ್ದಾರೆ. ನಾನು ನೇಣು ಹಾಕಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾನೆ.

ಶಿಕ್ಷಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

Related Articles

Back to top button