ಕೋಟೇಶ್ವರ: ಬೈಕ್ ಸ್ಕಿಡ್ ಆಗಿ ಬಿದ್ದು ನೆಂಪುವಿನ ವ್ಯಕ್ತಿ ಸಾವು

Views: 305
ಕನ್ನಡ ಕರಾವಳಿ ಸುದ್ದಿ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಕೋಟೇಶ್ವರದ ನಾಗಬನ ಕಟ್ಟೆ ಸಮೀಪದ ರಸ್ತೆಯಲ್ಲಿ ಎ. 23ರ ಬೆಳಗ್ಗೆ ಸಂಭವಿಸಿದೆ.
ಕರ್ಕುಂಜೆ ಗ್ರಾಮದ ನೆಂಪು ನಿವಾಸಿ ನರಸಿಂಹ ದೇವಾಡಿಗ ಪುತ್ರ ಅರುಣ್ ದೇವಾಡಿಗ (34) ಮೃತಪಟ್ಟವರು.
ಅರುಣ್ ಅವರು ಹತ್ತಿರದ ಸಂಬಂಧಿ ಸುಧಾಕರ ಅವರನ್ನು ಕರೆದುಕೊಂಡು ಬೀಜಾಡಿಗೆ ಬಂದು, ವಾಪಸ್ ಕೋಟೇಶ್ವರದ ಕಡೆಗೆ ಸಂಚರಿಸುತ್ತಿದ್ದ ವೇಳೆ ಕೋಟೇಶ್ವರದ ನಾಗಬನ ಬಳಿಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಎದೆ, ಕಾಲಿಗೆ ಗಂಭೀರ ಗಾಯಗೊಂಡ ಅರುಣ್ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನೆಂಪುವಿನ ನರಸಿಂಹ ದೇವಾಡಿಗ ಹಾಗೂ ಪಾರ್ವತಿ ದಂಪತಿಯ ಮೂವರು ಮಕ್ಕಳ ಪೈಕಿ ಅರುಣ್ ದಂಪತಿಗೆ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದು, ಕತಾರಿನಿಂದ ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮುಂದಿನ ತಿಂಗಳು ಮತ್ತೆ ಕತಾರಿಗೆ ಮರಳಿ ಹೋಗು ವವರಿದ್ದರು. ಆದರೆ ಅಷ್ಟರೊಳಗೆ ಈ ಅವಘಡ ಸಂಭವಿಸಿದೆ. ಸಹ ಸವಾರ ಸುಧಾಕರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.