ಕೃಷಿ

ಇಂಜಿನಿಯರ್ ಕೆಲಸ ಬಿಟ್ಟ ಕೃಷಿ ಆಯ್ಕೆ,     10ರಿಂದ 12ಲಕ್ಷ  ಸಂಪಾದಿಸ್ತಾರೆ ಈ ರೈತ! 

ಪ್ರಮೋದ್ ಗೌತಮ್, ಮೂಲತಃ ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಹೆಸರಿನಲ್ಲಿ 26 ಎಕರೆ ಕೃಷಿ ಭೂಮಿ ಇತ್ತು. ಹೀಗಾಗಿ ಇಂಜಿನಿಯರ್​ ಉದ್ಯೋಗ ತೊರೆದು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸಿದರು. ಸಾಂಪ್ರದಾಯಿಕ ಕೃಷಿ ಮಾಡದಿರಲು ನಿರ್ಧರಿಸಿದ ಅವರು ತೋಟಗಾರಿಕೆಯನ್ನು ಆಯ್ಕೆ ಮಾಡಿಕೊಂಡರು. ಇಂಜಿನಿಯರ್ ಕೆಲಸ ಬಿಟ್ಟ ಕೃಷಿ ಆಯ್ಕೆ, ಐಐಟಿ-ಐಐಎಂ ಪದವೀಧರರಿಗಿಂತ ಹೆಚ್ಚು ಸಂಪಾದಿಸ್ತಾರೆ ಈ ರೈತ!

Views: 0

ಮುಂಬೈ:ಭಾರತದಲ್ಲಿ ಹೆಚ್ಚಿನ ಸಂಬಳದ ಉದ್ಯೋಗಗಳು ಅಥವಾ ಹೆಚ್ಚಿನ ಆದಾಯದ ತರುವ ಉದ್ಯಮಗಳ ಕೆಲವು ಕ್ಷೇತ್ರಗಳಿವೆ. ನಾವು ಸರ್ಕಾರಿ ವಲಯವನ್ನು ಪರಿಗಣಿಸಿದರೆ, ನಾಗರಿಕ ಸೇವೆಗಳ ಅಂದರೆ ಐಎಎಸ್, ಐಪಿಎಸ್ ಅಧಿಕಾರಿಗಳ ಸಂಬಳ ಹೆಚ್ಚು. ಖಾಸಗಿ ವಲಯದ ವಿಷಯಕ್ಕೆ ಬಂದರೆ, IIT ಗಳಿಂದ ಪದವಿ ಪಡೆದ ಅಭ್ಯರ್ಥಿಗಳು, ಹಾಗೆಯೇ IIM ಗಳಿಂದ MBA ಪಡೆದವರಿಗೆ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಪಡೆಯುತ್ತಾರೆ. ಆದರೆ ಒಬ್ಬ ರೈತ ಐಐಟಿ ಅಥವಾ ಐಐಎಂ ಪದವೀಧರರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯ. ಆದರೂ ಇದು ಆಶ್ಚರ್ಯ ಎನಿಸಿದರೂ ಸತ್ಯ. ಈ ರೈತನ ಸ್ಪೂರ್ತಿದಾಯಕ ಯಶೋಗಾಥೆಯನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ

ಆ ರೈತನ ಹೆಸರು ಪ್ರಮೋದ್ ಗೌತಮ್, ಅವರು ಮೂಲತಃ ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಹೆಸರಿನಲ್ಲಿ 26 ಎಕರೆ ಕೃಷಿ ಭೂಮಿ ಇತ್ತು. ಹೀಗಾಗಿ ಇಂಜಿನಿಯರ್​ ಉದ್ಯೋಗ ತೊರೆದು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸಿದರು. ಸಾಂಪ್ರದಾಯಿಕ ಕೃಷಿ ಮಾಡದಿರಲು ನಿರ್ಧರಿಸಿದ ಅವರು ತೋಟಗಾರಿಕೆಯನ್ನು ಆಯ್ಕೆ ಮಾಡಿಕೊಂಡರು. ಗ್ರೀನ್ ಹೌಸ್ ನಿರ್ಮಾಣ ಮಾಡಿ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು. ಅದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡರು

ಆರಂಭದಲ್ಲಿ ಪ್ರಮೋದ್ ಸಣ್ಣ ಪ್ರಮಾಣದಲ್ಲಿ ಕೃಷಿ ಆರಂಭಿಸಿದರು. ಅದರಲ್ಲಿ ನೆಲಗಡಲೆ ಮತ್ತು ಅರಿಶಿನವನ್ನು ಬೆಳೆದರು. ಆದರೆ ಅದರಿಂದ ಅವರಿಗೆ ಹೆಚ್ಚಿನ ಲಾಭವಾಗಲಿಲ್ಲ. ನಂತರ ಅವರು ಹಸಿರುಕಾಳು ಅನ್ನು ಬೆಳೆಯಲು ಪ್ರಾರಂಭಿಸಿದರು. ಅವರು ಪಾಲಿಶ್ ಮಾಡದ ಬೇಳೆಕಾಳುಗಳ ಉತ್ಪಾದನೆಯನ್ನು ಪ್ರಾರಂಭಿಸಿದರು. ಇದರಿಂದ ಅವರಿಗೆಕಡಿಮೆ ಸಂಖ್ಯೆಯ ಕಾರ್ಮಿಕರ ಸಾಕಾಗಿತ್ತು. ಅವರ ವಿಧಾನದಲ್ಲಿ ಬೆಳೆದ ಹಸಿರು ಫಾಲಿಶ್ ಇಲ್ಲದ ಹಾಗೂ ಕಲಬೆರಕೆ ರಹಿತ ಮಾದರಿಯಾಗಿದ್ದರಿಂದ ಇವರ ಬೆಳೆಗಳು ಬೇಗ ಪ್ರಸಿದ್ಧಿ ಪಡೆದವು.

ತಮ್ಮದೇ ಬ್ರ್ಯಾಂಡ್ ಶುರು ಮಾಡಿದ ರೈತ

ಪ್ರಮೋದ್ ಗೌತಮ್ ಶೀಘ್ರದಲ್ಲೇ ಈ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದರು. ಅವರು ವಂದನಾ ಫುಡ್ಸ್ ಎಂಬ ತಮ್ಮದೇ ಆದ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿದರು. ಇದರ ಅಡಿಯಲ್ಲಿ ವಿವಿಧ ರೀತಿಯ ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಮಾರಾಟ ಮಾಡಲಾರಂಭಿಸಿದರು. ಇದು ಗುಣಮಟ್ಟದ ಉತ್ಪನ್ನವಾಗಿರುವುದರಿಂದ ಉತ್ತಮ ಬೇಡಿಕೆ ಸಿಕ್ಕಿತು. ಆದ್ದರಿಂದ ಅವರ ಲಾಭದ ಪ್ರಮಾಣವೂ ಹೆಚ್ಚಾಯಿತು. ಇಂದು, ಅವರ ಬ್ರ್ಯಾಂಡ್ ಉತ್ಪನ್ನಗಳು ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿಯೂ ಸಿಗುತ್ತಿವೆ.

ತಿಂಗಳಿಗೆ 10-12 ಲಕ್ಷ ಆದಾಯ

ಪ್ರಮೋದ್ ಗೌತಮ್ ಅವರ ವಾರ್ಷಿಕ ಆದಾಯ ಸುಮಾರು ಒಂದು ಕೋಟಿ ರೂಪಾಯಿಗಿಂತ ಹೆಚ್ಚಿದೆ. ಅಂದರೆ ಅವರ ತಿಂಗಳ ಸಂಬಳ 10 ರಿಂದ 12 ಲಕ್ಷ ರೂಪಾಯಿ. ಅನೇಕ IIT ಮತ್ತು IIM ಪದವೀಧರರಿಗೆ ಹೋಲಿಸಿದರೆ ಈ ಆದಾಯವು ನಿಸ್ಸಂಶಯವಾಗಿ ತುಂಬಾ ಹೆಚ್ಚಾಗಿದೆ. ಆದ್ದರಿಂದಲೇ ಅವರು ದೇಶದ ಅತ್ಯಂತ ಶ್ರೀಮಂತ ರೈತ ಎನಿಸಿಕೊಂಡಿದ್ದಾರೆ.

Related Articles

Back to top button
error: Content is protected !!