ಜನಮನ
ಹಠಾತ್ ಚಿರತೆ ದಾಳಿಯಿಂದ ಬಾಲಕ ಗಂಭೀರ

Views: 0
ಚಾಮರಾಜನಗರ ಇತ್ತೀಚಿಗಷ್ಟೇ ಚಿರತೆ ದಾಳಿಯಿಂದ ಬಾಲಕಿಯೊಬ್ಬಳು ಬಲಿಯಾಗಿದ್ದಳು.
ಮತ್ತೆ ಇದೀಗ ಈ ಘಟನೆ ಮಾಸುವ ಮುನ್ನವೇ ಮತ್ತೆ ಚಿರತೆ ದಾಳಿ ಮಾಡಿ ಮತ್ತೊಬ್ಬ ಬಾಲಕನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಂಡಿದ್ದಾನೆ.
ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್ ದಾಳಿಯೊಳಗಾದ ಬಾಲಕ ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತಿರುಳುತ್ತಿರುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು, ಇದನ್ನು ಕಂಡ ಜನರು ಕೂಗಾಡಿದಾಗ ಚಿರತೆ ಬಾಲಕನನ್ನು ಬಿಟ್ಟು ಓಡಿದೆ.
ಬಾಲಕನ ಮುಖ, ಗಂಟಲು, ಕಾಲು, ಹೊಟ್ಟೆ ಭಾಗಕ್ಕೆ, ಚಿರತೆ ಗಂಭೀರ ಗಾಯಗೊಳಿಸಿದೆ ಬಾಲಕನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.






