ಯುವಜನ
ಮದುವೆಯಾಗುದಾಗಿ ನಂಬಿಸಿ, ನಿಶ್ಚಿತಾರ್ಥಕ್ಕೆ ಹಿಂದೇಟು ಹಾಕಿದ ಯುವಕ!

Views: 34
ಕನ್ನಡ ಕರಾವಳಿ ಸುದ್ದಿ: ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯನ್ನು ಮದುವೆಯಾಗುದಾಗಿಸಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ವಿವಾಹವಾಗಲು ನಿರಾಕರಿಸಿದ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ.
ಈ ಬಗ್ಗೆ ಕಾರ್ಕಳ ಕುಕ್ಕುಂದೂರು ನಿವಾಸಿ ಸುಕೇಶ್ ಪುತ್ರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತೆಗೆ ಈತ ಏಳು ವರ್ಷದಿಂದಲೇ ಪರಿಚಯವಿದ್ದ ಎನ್ನಲಾಗಿದೆ.
ಆತ ಮದುವೆಯ ನೆಪ ಹೇಳಿ ವಿವಿಧ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ವಿದೇಶಕ್ಕೆ ಹೋಗಿದ್ದ. ಮರಳಿ ಬಂದು ಮತ್ತೆ ಅದೇ ಕೃತ್ಯವನ್ನು ಎಸಗಿದ್ದ. ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಕೇಳಿ ಕೊನೆಗೂ ಹಿಂದೇಟು ಹಾಕಿದ್ದಾನೆ.
ಈ ಬಗ್ಗೆ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.