ಇತರೆ
ಕುಂದಾಪುರ:ಕೋಟೇಶ್ವರದ ಬೇಕರಿ ವ್ಯಾಪಾರಿ ಮಲಗಿದಲ್ಲೇ ಸಾವು

Views: 362
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ಬೇಕರಿ ವ್ಯಾಪಾರಿಯೊಬ್ಬರು ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಚಿನ್ನ ಗ್ರಾಮದ ನಾಗೇಶ ಶೆಟ್ಟಿ (65) ಮೃತಪಟ್ಟ ವ್ಯಾಪಾರಿ
ಅವರು ವಡೇರ ಹೋಬಳಿ ಗ್ರಾಮದ ಬಸ್ರೂರು ಮೂರುಕೈ ಸಮೀಪ ವಿವೇಕ ಆಸ್ಪತ್ರೆ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅನಾರೋಗ್ಯದಲ್ಲಿರುವ ಅವರಿಗೆ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು, ಮರುದಿನ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಹೋಗಲು ನಾಗೇಶ ಶೆಟ್ಟಿ ಅವರಿಗೆ ಪರಿಚಿತರು ಕರೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






