ಯುವಜನ

ಕಾಣೆಯಾಗಿದ್ದ ಯುವಕನ ಬೈಕ್ ಬಾರ್ಕೂರು ಸೇತುವೆ ಬಳಿ, ಕೋಟ-ಪಡುಕೆರೆ ಬೀಚ್‌ನಲ್ಲಿ ಮೃತದೇಹ ಪತ್ತೆ! 

Views: 34

ಕನ್ನಡ ಕರಾವಳಿ ಸುದ್ದಿ: ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ಹೆಬ್ರಿಯ ಶಿವಪುರ ನಿವಾಸಿ ಶಿವಪ್ರಸಾದ (27) ಅವರ ಮೃತದೇಹ ಬುಧವಾರ ಬೆಳಗ್ಗೆ ಕೋಟ ಸಮೀಪದ ಪಡುಕೆರೆ ಬೀಚ್‌ನಲ್ಲಿ ಪತ್ತೆಯಾಗಿದೆ.

ಶಿವಪುರ ಹೆಬ್ರಿ ನಿವಾಸಿ ಗ್ರೇಪ್ತಾ ಕ್ರಾಸ್ತಾ ಎಂಬುವವರ ಮಾವನ ಮಗ ಶಿವಪ್ರಸಾದ್ ಅವರು ಜು.20ರಂದು ಮನೆಯಿಂದ ತೆರಳಿದ್ದು, ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪೊಲೀಸರು ವಿಚಾರಣೆ ನಡೆಸುವಾಗ ಆತ ತೆರಳಿದ್ದ ಬೈಕ್ ಬಾರ್ಕೂರು ಸೇತುವೆ ಸಮೀಪ ಪತ್ತೆಯಾಗಿತ್ತು.ಬುಧವಾರ ಬೆಳಗ್ಗೆ ಪಡುಕೆರೆ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಂಬಂಧಿಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತರು ಶಿವಪ್ರಸಾದ ಎಂಬುದು ದೃಢಪಟ್ಟಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!