ಸಾಂಸ್ಕೃತಿಕ

ವಿವಾದಾತ್ಮಕ ಹೇಳಿಕೆ ನೀಡಿದ ನಟ ದರ್ಶನ್​​ ಬಹಿರಂಗ ಕ್ಷಮೆಗೆ ಮಹಿಳೆಯರ ಪಟ್ಟು, ಆಯೋಗಕ್ಕೆ ದೂರು 

Views: 56

ಫೆಬ್ರವರಿ 17ನೇ ತಾರೀಖು. ದರ್ಶನ್​ ಸಿನಿ ಪಯಣ ಆರಂಭಿಸಿ 25 ವರ್ಷ ಪೂರೈಸಿದ ಕಾರಣ ಫ್ಯಾನ್ಸ್​ ಎಲ್ಲಾ ಸೇರಿ ಡಿ25 ಬೆಳ್ಳಿ ಪರ್ವ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದಲ್ಲಿ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ತಾನು ಇಷ್ಟು ದೊಡ್ಡ ಸ್ಟಾರ್​ ಆಗಲು ಪಟ್ಟ ಕಷ್ಟಗಳೆಷ್ಟು ಅನ್ನೋದನ್ನು ವಿವರಿಸುವಾಗ ಹೇಳಿದ ಈ ಡೈಲಾಗ್​​ ಇದೀಗ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ಇವರ ಅಜ್ಜಿನೇ ಬಡಿಯಾ ಎಂದಿದ್ದರು ದರ್ಶನ್​​. ಇದೇ ವಿಚಾರವಾಗಿ  ಹಲವು ಸಂಘಟನೆಯ ಮಹಿಳೆಯರು ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಕಾವೇರಿ ಭವನದಲ್ಲಿರೋ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜೊತೆಗೆ ದರ್ಶನ್​ ಬಹಿರಂಗವಾಗಿ ಕ್ಷಮೆ ಕೇಳ್ಬೇಕು ಅಂತಾನೂ ಆಗ್ರಹಿಸಿದ್ದಾರೆ.

ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ನಟ ದರ್ಶನ್​ ಹೀಗೆ ಪದೇ ಪದೇ ಅವಹೇಳನವಾಗಿ ಮಾತನಾಡಿತ್ತಿರೋದು ಎಷ್ಟು ಸರಿ? ವೇದಿಕೆಯಲ್ಲಿ ಸಂಸದೆ ಸುಮಲತಾ, ಸ್ವಾಮಿಜಿಗಳು ಇದ್ರು. ಅವರೂ ಏಕೆ ಇದನ್ನ ಪ್ರಶ್ನೆ ಮಾಡಿಲ್ಲ. ಅಂತಾನೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇನೇ ಇರ್ಲಿ ಒಬ್ಬ ಮಾದರಿ ನಟನಾಗಿ ಲಕ್ಷಾಂತರ ಅಭಿಮಾನಿಗಳ ನಾಯಕನಾಗಿರೋ ದರ್ಶನ್​ ಅಭಿಮಾನಿಗಳಿಗೆ ಕೊಡೋ ಸಂದೇಶ ಇದೇನಾ? ಅವರು ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಅಂತ ಸಿನಿಮಾಗಳಲ್ಲಿ ಮಾತ್ರ ಡೈಲಾಗ್​ ಹೊಡೆದ್ರೆ ಸಾಕಾ? ನಿಜ ಜೀವನದಲ್ಲಿ ಅದನ್ನ ಫಾಲೋ ಮಾಡೋಲ್ವಾ ಅಂತ ಮಹಿಳೆಯರು ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಕ್ಷಮೆಯಾಚಿಸದೇ ಇದ್ರೆ ಅವರ ಮನೆಯ ಮುಂದೆ ಹೋರಾಟ ಮಾಡೋದಾಗಿಯೋ ಎಚ್ಚರಿಸಿದ್ದಾರೆ. ಇದಕ್ಕೆ ದರ್ಶನ್​ ಏನ್​​ ಉತ್ತರಿಸ್ತಾರೆ ಕಾದು ನೋಡ್ಬೇಕಿದೆ.

ನಟ ದರ್ಶನ್​ ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಮಾತಾಡುತ್ತಾರೆ ಅಂದ್ರೆ ಎಷ್ಟು ಸರಿ. ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ ಅಂತಾ ನಟ ದರ್ಶನ್​ ವಿರುದ್ಧ ಮಹಿಳೆಯರು ಕೆಂಡಕಾರಿದ್ದಾರೆ.

ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ? ನಟ ದರ್ಶನ್​ ಅವರು ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಹೀಗೆ ಮಾತಾಡುತ್ತಾರೆ ಅಂದ್ರೆ ಅದು ಎಷ್ಟು ಸರಿ. ಅವರು ಇದಕ್ಕೆ ಕ್ಷಮೆ ಕೇಳಲೇಬೇಕು ಎಂದರು.

 

Related Articles

Back to top button