ಶಿಕ್ಷಣ

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿ ಪೂರ್ವ ಕಾಲೇಜು: ಒಂದು ವಾರಗಳ ಕಾಲ “ಮಂಥನ ಬೇಸಿಗೆ ಶಿಬಿರ” ಉದ್ಘಾಟನೆ

Views: 22

ಕನ್ನಡ ಕರಾವಳಿ ಸುದ್ದಿ: ಯಡಾಡಿ-ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ನಲ್ಲಿ ಒಂದು ವಾರಗಳ ಕಾಲ “ಮಂಥನ ಬೇಸಿಗೆ ಶಿಬಿರ” ಉದ್ಘಾಟಿಸಲಾಯಿತು.

ಮಾಜಿ ಸಚಿವ ಮತ್ತು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಶಿಬಿರ ಉದ್ಘಾಟಿಸಿ ಮಾತನಾಡಿ ಗೌರವ, ಪ್ರೀತಿ, ವಿಶ್ವಾಸಗಳನ್ನು ಪರಸ್ಪರ ಹಂಚಿಕೊಂಡಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮೂಡುತ್ತದೆ.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಪೋಷಕರು ನೀಡಬೇಕು ಆಗ ಮಾತ್ರ ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳಿಂದ ಆದರ್ಶ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಚಲನಚಿತ್ರ ನಟಿ ಸಂಗೀತ ಶೃಂಗೇರಿ ಮಾತನಾಡಿ, ಬಾಲ್ಯದಲ್ಲಿ ನಾವು ಮಣ್ಣಿನೊಂದಿಗೆ ಆಡುತ್ತಿದ್ದೆವು. ಇಂದು ನಮ್ಮ ಮಕ್ಕಳು ಮಣ್ಣಿನೊಂದಿಗಿನ ಸಂಬಂಧಗಳನ್ನು ವ್ಯವಹಾರಕ್ಕಷ್ಟೇ ಮೀಸಲಿಟ್ಟಿರುವುದು ವಿಷಾದನೀಯ. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದಾದರೂ ಸಹಾಯ ಮಾಡುವ ಪ್ರತಿಜ್ಞೆ ಮಾಡಬೇಕು ಎಂದರು.

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, ಶಿಕ್ಷಣದ ಜೊತೆಗೆ ಮಂಥನ ಬೇಸಿಗೆ ಶಿಬಿರದ ಮೂಲಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಉದ್ದೇಶ ಹೊಂದಿದೆ ಎಂದರು. ಈ ಬಾರಿಯ ಬೇಸಿಗೆ ಶಿಬಿರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಗೊಂಡಿದ್ದು ಏಳು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದೆ. ಈ ಬೇಸಿಗೆ ಶಿಬಿರವು ಸಂಪೂರ್ಣ ಉಚಿತವಾಗಿದೆ ಎಂದರು.

ಅರುಣ್ ಕುಮಾರ್ ಹೆಗ್ಡೆ, ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ರಂಜನ್ ಶೆಟ್ಟಿ ವಂದಿಸಿದರು. ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬೇಸಿಗೆ ಶಿಬಿರದಲ್ಲಿ 1064 ಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಿದರು , ಉದ್ಘಾಟನಾ ಸಮಾರಂಭದಲ್ಲಿ 2500 ಅಧಿಕ ಪೋಷಕರು ಅವರ ಮಕ್ಕಳ ಜೊತೆ ಭಾಗವಹಿಸಿದ್ದರು. 

ವೈವಿಧ್ಯತೆಯಿಂದ ಕೂಡಿದ ಬೇಸಿಗೆ ಶಿಬಿರ: ಸುಜ್ನಾನ ಎಜುಕೇಶನಲ್ ಟ್ರಸ್ಟ್‌ನ ‘ ಮಂಥನ ‘ ಬೇಸಿಗೆ ಶಿಬಿರವು ಏಪ್ರಿಲ್ 20ರಿಂದ ಏಪ್ರಿಲ್ 26ರ ತನಕ ನಡೆಯಲಿದ್ದು ವಿವಿಧ ಕಲೆ, ಸಾಹಿತ್ಯ, ಕ್ರೀಡೆ, ನಾಟಕ, ಅಭಿನಯ ತರಬೇತಿ, ಅರ್ಚರಿ ಟ್ರೈನಿಂಗ್, ಸಾಹಸ ಆಟಗಳು ಹೀಗೆ 30ಕ್ಕೂ ಅಧಿಕ ಚಟುವಟಿಕೆಗಳ ತರಬೇತಿಯನ್ನು ಒಳಗೊಂಡಿತ್ತು. ಸುಮಾರು 50ಕ್ಕೂ ಅಧಿಕ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಸಂಪೂರ್ಣ ಬೇಸಿಗೆ ಶಿಬಿರ ಉಚಿತವಾಗಿದ್ದು ಊಟ, ತಿಂಡಿ, ವಾಹನ ಸೌಲಭ್ಯ, ಅಗತ್ಯವಿರುವವರಿಗೆ ಹಾಸ್ಟೆಲ್ ಸೌಲಭ್ಯ ಎಲ್ಲವೂ ಉಚಿತವಾಗಿದ್ದು ಕರಾವಳಿ ಭಾಗದಲ್ಲೇ ಒಂದು ವಿಶೇಷ ಬೇಸಿಗೆ ಶಿಬಿರ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Articles

Back to top button