ಧಾರ್ಮಿಕ
ಬಾರ್ಕೂರು ಚೌಳಿಕೆರೆ ದೇವಸ್ಥಾನದಲ್ಲಿ ಕಳ್ಳತನ

Views: 74
ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ಹೊಸಾಳ ಗ್ರಾಮದ ಚೌಳಿಕೆರೆ ಶ್ರೀಭೈರವ ಗಣಪತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳವು ನಡೆದಿದೆ. ಎಡಬದಿಯ ಪೌಳಿ ಏರಿ ಒಳ ಪ್ರವೇಶಿಸಿದ ಕಳ್ಳರು ತೀರ್ಥ ಮಂಟಪದಲ್ಲಿ ಇರಿಸಿದ್ದ ಕಾಣಿಕೆ ಹುಂಡಿ ಒಡೆದು ಅದರಲ್ಲಿದ್ದ ಸುಮಾರು 10ರಿಂದ 15 ಸಾವಿರ ರೂ. ಹಣವನ್ನು ಕಳವುಗೈದು, ಕಾಣಿಕೆ ಡಬ್ಬವನ್ನು ದೇವಸ್ಥಾನದ ಹಿಂಬದಿ ಎಸೆದಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.