ಕನ್ನಡ ಕರಾವಳಿ ಸುದ್ದಿ: ಕೋಟ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಉದ್ಯಮಿ ಸತೀಶ್.ಹೆಚ್.ಕುಂದರ್ ಅವರನ್ನು ಆಯ್ಕೆಮಾಡಲಾಗಿದೆ.
ಏ.18 ರಂದು ದೇಗುಲದಲ್ಲಿ ನಡೆದ ಸಭೆಯಲ್ಲಿ ಸತೀಶ್.ಹೆಚ್. ಕುಂದರ್ ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿ ಸದಸ್ಯರಾಗಿ ರವಿ ಐತಾಳ್ ಅರ್ಚಕರು, ಅಶೋಕ್ ಶೆಟ್ಟಿ, ಕೊಯ್ಕೂರು, ಕೃಷ್ಣ ದೇವಾಡಿಗ ಹರ್ತಟ್ಟು, ಅಚ್ಯುತ ಹಂದೆ ಮಣೂರು, ದಿನೇಶ್ ಆಚಾರ್ಯ ಮಣೂರು, ಶ್ರೀಮತಿ ಸುಫಲ ಶೆಟ್ಟಿ ಮಣೂರು, ಶ್ರೀಮತಿ ದಿವ್ಯ ಪ್ರಭು ಮಣೂರು, ಚಂದ್ರ ಹರ್ತಟ್ಟು ಇವರನ್ನು ಆಯ್ಕೆ ಮಾಡಲಾಯಿತು.