ಆಪರೇಷನ್ ಸಿಂಧೂರ: 25 ನಿಮಿಷಗಳಲ್ಲಿ 9 ಉಗ್ರರ ಅಡಗುತಾಣ ಧ್ವಂಸ, 90ಕ್ಕೂ ಹೆಚ್ಚು ಉಗ್ರರು ಸಾವು

Views: 89
ಕನ್ನಡ ಕರಾವಳಿ ಸುದ್ದಿ: ಆಪರೇಷನ್ ಸಿಂಧೂರ್ ಹೆಸರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಮುಂದಿನ 24 ಗಂಟೆಯಲ್ಲಿ ಪ್ರತಿದಾಳಿಯ ಬಗ್ಗೆ ಪಾಕಿಸ್ತಾನ ಕೂಡ ಎಚ್ಚರಿಸಿದೆ. ಪಾಕ್ ಮತ್ತೆ ತನ್ನ ನರಿಬುದ್ಧಿ ತೋರಿಸಿದರೆ ಭಾರತ ಆಪರೇಷನ್ ಸಿಂಧೂರ 2.O ನಡೆಸಲು ಹಿಂದೆ ಮುಂದೆ ನೋಡಲ್ಲ.
ಭಾರತ ಕೇವಲ 25 ನಿಮಿಷಗಳಲ್ಲಿ 9 ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿದೆ. 90ಕ್ಕೂ ಹೆಚ್ಚು ಉಗ್ರರು ಪರಲೋಕ ಸೇರಿರುವ ಬಗ್ಗೆ ಮಾಹಿತಿ ಇದೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಕುಟುಂಬ, ಆಪ್ತರು ಸೇರಿ 14 ಜನ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಭಯೋತ್ಪಾದಕತೆ ಹರಡಲು ಈ ಎಲ್ಲಾ ಸಂಘಟನೆಗಳಿಗೆ ಪಾಕಿಸ್ತಾನ ಸೇನೆ, ಪಾಕ್ ನ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ನೀಡುತ್ತದೆ. ಇಲ್ಲಿನ ಉಗ್ರರಿಗೆ ಸಂಪನ್ಮೂಲ, ಸೈದ್ಧಾಂತಿಕ, ಮಿಲಿಟರಿ ಬೆಂಬಲ, ನೇರ ಯುದ್ಧ ತರಬೇತಿ ಕೂಡ ಸೇನೆಯೇ ನೀಡುತ್ತದೆ.
ಇಲ್ಲಿನ ತರಬೇತಿ ಶಿಬಿರಗಳಿಗೆ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ರೆಗ್ಯುಲರ್ ಅಗಿ ಭೇಟಿ ನೀಡುತ್ತಾರೆ. ಈ ಗುಂಪುಗಳೆಲ್ಲಾ ಜಾಗತಿಕವಾಗಿ ಗಮನ ತಪ್ಪಿಸಲು ಈ ಗುಂಪುಗಳಿಗೆ ದಿ ರೆಸಿಸ್ಟೆನ್ಸ್ ಫ್ರಂಟ್, ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಮತ್ತು ಕಾಶ್ಮೀರಿ ಟೈಗರ್ಸ್ ಎಂಬ ಹೆಸರಿನಡಿಯೂ ಚಟುವಟಿಕೆ ಮಾಡುತ್ತದೆ.