ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ “ಯೋಗ ಸಂಗಮ” ಕಾರ್ಯಕ್ರಮ
"ಯೋಗ ಸರ್ವಾಂಗೀಣ ಕಲಿಕಾ ಸಾಧನೆಯ ಮಾರ್ಗ" ---ಶಿಕ್ಷಣ ಸಂಯೋಜಕ ಶೇಖರ್ ಯು

Views: 336
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಲಯದ ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ಯೋಗ ಸಂಗಮ’ ಕಾರ್ಯಕ್ರಮ ಆಯೋಜಿಸಲಾಯಿತು.
ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕರಾದ ಶ್ರೀ ಶೇಖರ ಯು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಸರ್ವರೋಗಾಪಹಾರಿಯಾಗಿರುವ ಯೋಗವನ್ನು ಜಗತ್ತಿಗೆ ಪರಿಚಯಿಸಿದವರೇ ಭಾರತೀಯ ಋಷಿ ಮುನಿಗಳು. ಜಾಗತಿಕ ಯೋಗ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿರುವ ಭಾರತೀಯ ಋಷಿಮುನಿಗಳಲ್ಲಿ ಯೋಗ ಪಿತಾಮಹರೆನಿಸಿದ ಪತಂಜಲಿ ಮುನಿಗಳ ಯೋಗ ಸಾಧನೆಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮ್ಮ ಭಾರತದ ಭವ್ಯ ಸಂಸ್ಕೃತಿಯ ಮಹತ್ತರ ಭಾಗವಾಗಿರುವ ಯೋಗವನ್ನು ಎಲ್ಲರೂ ಪ್ರತಿನಿತ್ಯ ಮಾಡುವುದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತರಾಗಿ ಉತ್ತಮ ವ್ಯಕ್ತಿತ್ವ ಹೊಂದಬಹುದು. ಸ್ವಸ್ಥ ಸಮಾಜವನ್ನು ನಿರ್ಮಿಸಬಹುದು. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಯೋಗಾಭ್ಯಾಸ ಮಾಡುವುದರಿಂದ ಕಲಿಕೆಯಲ್ಲಿ ಏಕಾಗ್ರತೆಯನ್ನು ಕಂಡುಕೊಂಡು ಸರ್ವಾಂಗೀಣ ಕಲಿಕಾ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನಾ, ಸಹ ಶಿಕ್ಷಕ ಶ್ರೀನಿವಾಸ, ಸಹಶಿಕ್ಷಕಿಯರಾದ ಶ್ರೀಮತಿ ಚಿತ್ರಾಕುಮಾರಿ, ರಶ್ಮಿ, ಲಲಿತಾ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಯೋಗದ ವಿವಿಧ ಆಸನಗಳನ್ನು ಬಹಳ ಉತ್ಸುಕತೆಯಿಂದ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಹಶಿಕ್ಷಕ ರಾಜೀವ ಕುಲಾಲ್, ಸಹಶಿಕ್ಷಕಿಯರಾದ ಶ್ರೀಮತಿ ಮಾಲತಿ, ಶಾರದಾ, ಪೂರ್ಣಿಮಾ, ಮಮತಾ, ರೂಪಾ ಮಟ್ಟಿಕೋಟಿ, ಶ್ಯಾಮಲಾ, ಅತಿಥಿ ಶಿಕ್ಷಕಿ ಶ್ರೀಮತಿ ಮಹಾಲಕ್ಷ್ಮೀ, ಗೌರವ ಶಿಕ್ಷಕಿ ಶ್ರೀಮತಿ ಭಾರತಿ ಪೂರ್ವ ಪ್ರಾಥಮಿಕ ವಿಭಾಗದ ದೀಪಿಕಾ, ನಾಗರತ್ನ, ವೀಣಾ, ಅಡುಗೆ ಸಿಬ್ಬಂಧಿಗಳಾದ ಆಶಾ, ಉಮಾ, ಶಾಂತ, ಪುಷ್ಪ, ಸವಿತಾ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಭಾರ ಮುಖ್ಯೋಪಾಧ್ಯಾರಾದ ಶ್ರೀ ಸತೀಶ ಶೆಟ್ಟಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನಾ ವಂದಿಸಿದರು.