ಶಿಕ್ಷಣ

ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ  ಶ್ರೀರಾಮ ಪ್ರಸಾದ ಮಧ್ಯಾಹ್ನದ ಊಟದ ಯೋಜನೆ ಉದ್ಘಾಟನೆ 

Views: 368

ಕನ್ನಡ ಕರಾವಳಿ ಸುದ್ದಿ: ಶ್ರೀರಾಮ ಪ್ರಸಾದ ಮಧ್ಯಾಹ್ನದ ಊಟದ ಯೋಜನೆ, ಶ್ರೀರಾಮ ಸೇವಾ ಸಂಘ, ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಕೋಟೇಶ್ವರ ಇವರ ಆಶ್ರಯದಲ್ಲಿ ಕೋಟೇಶ್ವರದ ಗೌಡ ಸಾರಸ್ವತ ಸಮಾಜದ ವತಿಯಿಂದ, ಪದವಿ ಪೂರ್ವ ಕಾಲೇಜು ಕೋಟೇಶ್ವರದಲ್ಲಿ ಕಳೆದ 15 ವರ್ಷಗಳಿಂದ ಮಧ್ಯಾಹ್ನದ ಅನ್ನಪ್ರಸಾದ ಸೇವೆಯನ್ನು ಸುಮಾರು 200 ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ನೀಡುತ್ತಿದ್ದು, ವಿದ್ಯುಕ್ತವಾಗಿ 2025 26 ನೇ ಸಾಲಿನ ಯೋಜನೆಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾನ್ವಿತರಾದ ಶ್ರೀ ದಿನೇಶ್ ಜಿ ಕಾಮತ್ ಆಡಳಿತ ಮೋಕ್ತೇಸರರು ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಕೋಟೇಶ್ವರ, ಶ್ರೀ ಶ್ರೀಧರ್ ವಿ ಕಾಮತ್ ನಿಕಟ ಪೂರ್ವ ಅಧ್ಯಕ್ಷರು, ಶ್ರೀ ಶಂಕರ ವಿ ಕಾಮತ್ ಅಧ್ಯಕ್ಷರು ಶ್ರೀರಾಮ ಸೇವಾ ಸಂಘ, ಶ್ರೀ ಸದಾನಂದ ವಿ ಪೈ ಕಾರ್ಯದರ್ಶಿ, ಶ್ರೀ ರವೀಂದ್ರ ಪೈ ಜೊತೆ ಕಾರ್ಯದರ್ಶಿ ಶ್ರೀ ಜಗದೀಶ್ ಭಟ್ ಕಾರ್ಯದರ್ಶಿ ಸಮಿತಿಯ ಸದಸ್ಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಎಲ್ಲರಿಗೂ ಗೌರವ ಸಮರ್ಪಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಸರ್ವರನ್ನು ಪ್ರಸ್ತಾವಿಕವಾಗಿ ಶ್ರೀ ಹರೀಶ್ ನಾಯಕ್ ರಾಜ್ಯಶಾಸ್ತ್ರ ಉಪನ್ಯಾಸಕರು ಸ್ವಾಗತಿಸಿದರು. ಡಾ. ಸುಧಾಕರ್ ಕನ್ನಡ ಉಪನ್ಯಾಸಗಳು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೀನಾ ಇಂಗ್ಲಿಷ್ ಉಪನ್ಯಾಸಕಿ ವಂದನಾರ್ಪಣೆ ಸಲ್ಲಿಸಿದರು. ಅನ್ನದಾನ ಸುಖಿನೋ ಭವಂತು ಜಯ ಘೋಷಣೆದೊಂದಿಗೆ ಸರ್ವರನ್ನು ಬೀಳ್ಕೊಡಲಾಯಿತು.

Related Articles

Back to top button