ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ಶಿಕ್ಷಕ-ರಕ್ಷಕರ ಸಭೆ

Views: 81
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ಶಿಕ್ಷಕ-ರಕ್ಷಕರ ಸಭೆ ಜೂನ್ 14ರಂದು ಶನಿವಾರ ನಡೆಸಲಾಯಿತು
ಮಕ್ಕಳ ಪ್ರಗತಿಯು ಶಾಲೆಯಷ್ಟೇ ಅಲ್ಲ ಪೋಷಕರ ಸಹಭಾಗಿತ್ವದಿಂದ ಸಾಧ್ಯ. ಶಾಲೆ ಮತ್ತು ಮನೆಯ ನಡುವೆ ಸಮನ್ವಯ ಇದ್ದರೆ ಶಿಕ್ಷಣ ಫಲಪ್ರದವಾಗುತ್ತದೆ.ದೇವರನ್ನು ಸ್ಮರಿಸುತ್ತಾ ತಂತ್ರಜ್ಞಾನವನ್ನು ಬಳಸಿ ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪ ಅವರು ಮಕ್ಕಳ ಪೋಷಕರಿಗೆ ಶಾಲೆಯ ಸಂಸ್ಕೃತಿ,ಪಠ್ಯಕ್ರಮ ಮತ್ತು ತಾಂತ್ರಿಕ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆಂಟ್ ತಂಡದ ಪ್ರಣವ್ ಅವರು AI ಪ್ರಾಮುಖ್ಯತೆ ಮತ್ತು ಅದು ಮುಂದಿನ ಪೀಳಿಗೆಗೆ ಯಾವ ರೀತಿಯಾಗಿ ಉಪಯುಕ್ತ ವಾಗುವುದು ಎಂದು ವಿವರವಾಗಿ ತಿಳಿಸಿದರು.
ಸಭೆಯಲ್ಲಿ ಬಿ.ಬಿ.ಹೆಗಡೆ ಕಾಲೇಜು ಕುಂದಾಪುರ ಇದರ ಉಪ ಪ್ರಾಂಶುಪಾಲರದ ಶ್ರೀ ಚೇತನ್ ಕುಮಾರ್ ಶೆಟ್ಟಿ ಅವರು ಮಕ್ಕಳ ಪೋಷಕರಿಗೆ ಗೆಲ್ಲುವುದು ಮಾತ್ರ ಮುಖ್ಯವಲ್ಲ ಸೋಲಿನಿಂದ ಮಕ್ಕಳು ಹೇಗೆ ಪಾಠ ಕಲಿಯಬೇಕೆಂಬುದನ್ನು ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಬೇಕು. ಸಂಸ್ಕೃತಿ, ಚಾರಿತ್ಯ, ಶಿಸ್ತು ಜೊತೆಗೆ ಪೋಷಕರ ಕರ್ತವ್ಯವನ್ನು ಪೋಷಕರಿಗೆ ಮನವರಿಕೆ ಮಾಡಿದರು.
ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ್ ಶೆಟ್ಟಿ ಅವರು ಮಕ್ಕಳ ಪೋಷಕರ ಕುರಿತು ಮಕ್ಕಳಿಗೆ ಶಾಲೆಯ ಮತ್ತು ಶಿಕ್ಷಕರ ಬಗ್ಗೆ ಅಭಿಮಾನ ಬೆಳೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ಮಕ್ಕಳ ಮಕ್ಕಳ ಪೋಷಕರನ್ನು ಉದ್ದೇಶಿಸಿ 6 ರಿಂದ 10 ನೇ ತರಗತಿಯವರೆಗಿನ ಮಕ್ಕಳಿಗೆ C. E.T, ಮತ್ತು N.E.E. T ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಭರವಸೆ ನೀಡಿದರು. ಹಾಗೂ ಈ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಲಾ ಆಡಳಿತ ಅಧಿಕಾರಿ ಶ್ರೀಮತಿ ಆಶಾ ಶೆಟ್ಟಿಯವರು ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಸವಿತಾ ಆರ್ ಕಾರ್ಯಕ್ರಮ ನಿರೂಪಿಸಿದರು, ಶ್ವೇತ ಸ್ವಾಗತಿಸಿದರು, ಶ್ರೇಯ ವಂದಿಸಿದರು.