ಸಿಎಂ ಪತ್ನಿ ಸೈಟ್ ವಾಪಸ್.. ಸಿದ್ದರಾಮಯ್ಯಗೆ ವರವಾಗುತ್ತಾ,.. ಕಂಟಕವಾಗುತ್ತಾ..!?

Views: 79
ಬೆಂಗಳೂರು: ನಾನು ತಪ್ಪು ಮಾಡಿಲ್ಲ,.. ಜಗ್ಗೋದಿಲ್ಲ,.. ಬಗ್ಗೋದಿಲ್ಲ,.. ಹೆದರುವುದಿಲ್ಲ ಎಂದು ಹೇಳುತ್ತಿದ್ದ ಸಿಎಂ, ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.
ಮೈಸೂರು ಲೋಕಾಯುಕ್ತ ತನಿಖೆಯ ನಡುವೆ, ಜಾರಿ ನಿರ್ದೇಶನಾಲಯ ಇಸಿಆರ್ ದಾಖಲಿಸಿಕೊಂಡಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಸೈಟ್ ವಾಪಸ್ ಕೊಡ್ಸಿದ್ರೆ ಮುಡಾ ಕೇಸ್ನಲ್ಲಿ ಕಾನೂನು ಕುಣಿಕೆಯಿಂದ ಪಾರಾಗುವುದು. ಸುಪ್ರೀಂಕೋರ್ಟ್ಗೆ ಹೋದಾಗ ನಿವೇಶನ ವಾಪಸ್ ಕೊಟ್ಟಿದ್ದೇವೆ ಎಂದು ವಾದಿಸಲು ಸಾಧ್ಯವಾಲಿದೆ.
ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ ತಡರಾತ್ರಿ ಸಭೆ ನಡೆಸಿ ಸೈಟ್ ವಾಪಸ್ ನೀಡುತ್ತಿರುವ ಬಗ್ಗೆ ಪತ್ರ ರಿಲೀವ್ ಆಗ್ತಿದ್ದಂತೆ, ಅತ್ತ ಸಿಎಂ ಸಿದ್ದರಾಮಯ್ಯ ತಡರಾತ್ರಿಯೇ ಕಾನೂನು ಹೋರಾಟದ ಬಗ್ಗೆ ಕೆಲವರ ಬಳಿ ಸಹಾಯ ಪಡೆದಿದ್ದಾರೆ ಎನ್ನಲಾಗಿದೆ. ತಡರಾತ್ರಿ ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ, ಬೈರತಿ ಸುರೇಶ್, ಎ.ಎಸ್. ಪೊನ್ನಣ್ಣ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ಕೇಸ್ ಹಿಂಪಡೆದಿರುವುದು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಸೈಟ್ ವಾಪಸ್ ನೀಡುವ ಮೂಲಕ ಜನತಾ ನ್ಯಾಯಾಲಯದ ಮುಂದೆ ಸಿದ್ದರಾಮಯ್ಯ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಕೇಸ್ ಇನ್ನು ಜಾಸ್ತಿ ಆಗುತ್ತದೆ. ತಪ್ಪು ಮಾಡೇ ಇಲ್ಲ ಎಂದರೆ ವಾಪಸ್ ಯಾಕೆ ಕೊಟ್ರಿ. ಈಗ ವಾಪಸ್ ಕೊಟ್ಟ ಮೇಲೆ ಇಡೀ ಕರ್ನಾಟಕದ ಜನರಿಗೆ ಸಿಎಂ ತಪ್ಪು ಮಾಡಿದ್ದಾರೆ ಎಂದು ಅನಿಸುತ್ತದೆ. ಜನತಾ ನ್ಯಾಯಾಲಯದ ಮುಂದೆ ವಾಪಸ್ ಕೊಟ್ಟು ತಪ್ಪಾಗಿದೆ ಎಂದು ಒಪ್ಪಿಕೊಂಡಂತೆ ಆಯಿತು.
ಇನ್ನು ಸಿಎಂ ಪತ್ನಿ ಪತ್ರದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ. ರಾಜೀನಾಮೆಯೊಂದೆ ನಿಮಗೆ ಉಳಿದಿರುವ ದಾರಿ ಎಂದು ಕುಟುಕಿದ್ದಾರೆ. ಮುಡಾ ಭೂ ಸುಳಿಯಲ್ಲಿ ಸಿಲುಕಿರುವ ಸಿಎಂ ವಿರುದ್ಧ ಕಾನೂನಿನ ಇಡಿತ ಬಿಗಿಯಾಗ್ತಿದ್ದಂತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಮುಂದಾಗಿದೆ. ಇವತ್ತು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.






