ರಾಜಕೀಯ
ಬೈಂದೂರು ಕ್ಷೇತ್ರಕ್ಕೆ ಗುರುರಾಜ್ ಗಂಟಿಹೊಳೆ ?

Views: 3
ಕುಂದಾಪುರ : ರಾಜ್ಯದಾದ್ಯಂತ ಬಿಜೆಪಿಯಲ್ಲಿ ಹೊಸ ಮುಖಗಳ ಪರಿಚಯದಲ್ಲಿ ಬೈಂದೂರು ಕ್ಷೇತ್ರಕ್ಕೆ ಆರ್. ಎಸ್. ಎಸ್.ಪ್ರಚಾರಕ ಗುರುರಾಜ್ ಗಂಟೆಹೊಳೆ ಹೆಸರು ಪ್ರಸ್ತಾವವಾಗಿದೆ.
ಈಗಾಗಲೇ ಬೈಂದೂರಿಗೆ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೆಸರು ಪ್ರಸ್ತಾವದ ಬೆನ್ನಲ್ಲೆ ಬಂಟ ಸಮುದಾಯದ ಇನ್ನೊಬ್ಬ ನಾಯಕ ಗುರುರಾಜ್ ಗಂಟಿಹೊಳೆ ಹೆಸರು ಕೇಳಿ ಬಂದಿದೆ.
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಬೈಂದೂರು ಮೂಲದ ಬೆಂಗಳೂರು ಉದ್ಯಮಿ ಗೋವಿಂದ ಬಾಬು ಪೂಜಾರಿ, ಸ್ಥಳೀಯ ನಾಯಕ ಬಾಬು ಹೆಗ್ಡೆ, ಸುಖಾನಂದ ಶೆಟ್ಟಿ, ಮಾಜಿ ಸಚಿವ ಕುಂದಾಪುರದ ಜಯಪ್ರಕಾಶ್ ಹೆಗ್ಡೆ ಹೆಸರು ಪ್ರಸ್ತಾವದಲ್ಲಿದ್ದರೂ ಗಂಟಿ ಹೊಳೆ ಹೆಸರು ಇದೀಗ ಪ್ರಥಮ ಸ್ಥಾನದಲ್ಲಿದೆ.






