ರಾಜಕೀಯ

ಬೈಂದೂರು: ಗೋಪಾಲ ಪುಜಾರಿಗೆ ಟಿಕೆಟ್ ಬಿಜೆಪಿ: ಟೆಕೆಟ್ ಗೊಂದಲ

Views: 0

ಕುಂದಾಪುರ : ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮಾಜಿ ಶಾಸಕ ಗೋಪಾಲ ಪೂಜಾರಿ ಈಗಾಗಲೇ ಟಿಕೆಟ್ ಪಡೆದು, ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮೂಲ ಬಿಜೆಪಿ, ವಲಸಿಗರ ಮಧ್ಯೆ ಟಿಕೆಟ್ ಗಾಗಿ ಪೈಟ್ ಜೋರಾಗಿದೆ.

ಕಳೆದ ಚುನಾವಣಿಯಲ್ಲಿ ಇದೇ ವಾತಾವರಣ ಸೃಷ್ಟಿಯಾಗಿ ವಲಸಿಗ ಸುಕುಮಾರ ಶೆಟ್ಟಿ ಅವರು ಟಿಕಟ್ ಪಡೆದುಕೊಂಡು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಬಾಬು ಹೆಗ್ಡೆ, ಉದ್ಯಮಿ ಗೋವಿಂದ ಬಾಬು ಪೂಜಾರಿ ಹೆಸರು ಕೇಳಿಬರುತ್ತಿದೆ. ಕೊನೆ ಗಳಿಗೆಯಲ್ಲಿ ಬಿಜೆಪಿಯ 70 ರ  ವಯೋಮಿತಿ ಮಾನ ದಂಡದಲ್ಲಿರುವ ಶಾಸಕ ಸುಕುಮಾರ ಶೆಟ್ಟಿ, ಜಯಪ್ರಕಾಶ್ ಹೆಗ್ಡೆಯವರಿಗೆ, ಮಾನದಂಡ ಸಡಿಲಿಕೆಯಾದರೆ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಸಿಗುವ ಸಾದ್ಯತೆ ಹೆಚ್ಚು.

ಉಡುಪಿ ಜಿಲ್ಲೆಯಲ್ಲಿ  ಬಿಜೆಪಿ ಗೆ ಬೈಂದೂರಿನಲ್ಲಿ ಅಭ್ಯಥಿ೯ಗಳನ್ನು  ಆಯ್ಕೆ ಮಾಡುವುದು ತಲೆನೋವಾಗಿದೆ, ಈ ಕ್ಷೇತ್ರ ಶಿವಮೊಗ್ಗ ಲೋಕಸಭಾ ವ್ಯಾಪ್ತಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ವೈ ಹಿಡಿತದಲ್ಲಿರುದರಿಂದ ಕ್ಷೇತ್ರ ವನ್ನು ಮತ್ತೆ ಹೇಗಾದರೂ  ಮಾಡಿ ಉಳಿಸಿಕೊಳ್ಳಲು ಜಾತಿ, ಆಡಳಿತ ವಿರೋದಿ ವಾತಾವರಣ,ಮತ್ತು ಕಳೆದ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಅವರು ಸೋತಿದ್ದು, ಈ ಸಾರಿ ಅನುಕಂಪದ ಆಲೆಯನ್ನು ,.

ಈ ಹಿಂದೆ ಕ್ಷೇತ್ರ ವಿಂಗಡಣೆಯಿಂದ ಹಾಲಾಡಿ  ಇವರ ಕ್ಷೇತ್ರ ಹೆಚ್ಚಾಗಿ ಬೈಂದೂರಿಗೆ ಸೇರಿದ್ದರಿಂದ ಇವರ ಪ್ರಭಾವವನ್ನು ಬಳಸಿಕೊಂಡು  ಸಮಥ೯ ಅಭ್ಯಥಿ೯ಯನ್ನು ಆಯ್ಕೆ ಮಾಡುವಲ್ಲಿ ಹೈಕಮಾಂಡ್ ವರೆಗೆ ತಲುಪಿದೆ.

4 ಭಾರಿ ಶಾಸಕರಾಗಿ, 3 ಭಾರಿ ಸೋತಿರುವ, 8 ನೇ ಭಾರಿ ಸ್ಪದಿ೯ಸುತ್ತಿರುವ ಗೋಪಾಲ ಪೂಜಾರಿ ಅವರು ಅನುಕಂಪದ ಆಧಾರದ ಮೇಲೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಕಾಂಗ್ರೆಸ್ ನಿಂದ ವಲಸೆ ಬಂದಿರುವ ಸುಕುಮಾರ ಶೆಟ್ಟಿ ಅವರನ್ನು ಬಿಟ್ಟರೆ ಸಂಘ ಪರಿವಾರದವರು ಮತ್ತು ಬಿಜೆಪಿಗರ ಮಧ್ಯೆ ಟಿಕೆಟ್ ಗಾಗಿ ಲಾಬಿ ನಡೆಯುತ್ತಿದ್ದರೂ

ಬಿಜೆಪಿ ಮತ್ತು ಕಾಂಗ್ರೆಸ್ ಮದ್ಯೆ ಸಮಬಲದ ಹೋರಾಟದಿಂದ ಯಾರು ಗೆಲ್ಲುತ್ತಾರೆ ಎಂಬುವುದು ಕುತೂಹಲ  ಮೂಡಿಸಿದೆ.

Related Articles

Back to top button
error: Content is protected !!