ಜನಮನ
ಕುಂದಾಪುರ:82 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಏರಿ ಶುಚಿಗೊಳಿಸಿದ ಜ್ಯೋತಿರಾಜ್

Views: 262
ಕನ್ನಡ ಕರಾವಳಿ ಸುದ್ದಿ: ಚಿತ್ರದುರ್ಗದ ಬಂಡೆ, ಗೋಡೆ, ಎತ್ತರದ ಕಟ್ಟಡಗಳನ್ನು ಕ್ಷಣಮಾತ್ರದಲ್ಲಿ ಏರುವ ಜ್ಯೋತಿರಾಜ್ ಯಾನೆ ಕೋತಿರಾಜ್ ಕುಂದಾಪುರ ತಾಲೂಕಿನ ಹಂಗ್ಲೂರಿನಲ್ಲಿರುವ ಅತಿ ಎತ್ತರದ 82 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಏರಿ ಶುಚಿಗೊಳಿಸಿದರು.
ಹಂಗಳೂರಿನ ಪ್ರಸನ್ನ ಆಂಜನೇಯ ದೇವಸ್ಥಾನದ 82 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಕರ್ನಾಟಕದ ಸೈಡರ್ ಮ್ಯಾನ್ ಎಂದೇ ಕರೆಯಲ್ಪಡುವ ಕೋತಿರಾಜ್ ಯಾನೆ ಜ್ಯೋತಿರಾಜ್ ಚಿತ್ರದುರ್ಗ ಅವರು ಹಗ್ಗ ಅಥವಾ ಇನ್ನಾವುದೇ ಸಹಾಯವಿಲ್ಲದೇ ಏರಿ ಆಂಜನೇಯ ಮೂರ್ತಿಯನ್ನು ಶುಚಿಗೊಳಿಸಿದರು.
2014ರ ಆಗಸ್ಟ್ ಮತ್ತು 2017ರ ಮೇ ತಿಂಗಳಲ್ಲಿ ಕುಂದಾಪುರಕ್ಕೆ ಆಗಮಿಸಿದ್ದ ಜ್ಯೋತಿರಾಜ್ ಇಲ್ಲಿನ ಶಾಸ್ತ್ರೀವೃತ್ತದ 5 ಅಂತಸ್ತಿನ ಜೆ.ಕೆ. ಟವರ್ಸ್ ಏರಿದ್ದರು. ಇದೀಗ ಕುಂದಾಪುರಕ್ಕೆ ಆಗಮಿಸಿದ ಜ್ಯೋತಿರಾಜ್ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರುವ ಮೂಲಕ ಬೆರಗು ಮೂಡಿಸಿದ್ದರು.