ರಾಜಕೀಯ
ಮೊದಲ ಸಂಪುಟ ಸಭೆಯಲ್ಲಿ ‘ಗ್ಯಾರಂಟಿ’ ಅನುಪ್ಠಾನ : ಕಾಂಗ್ರೆಸ್ ವಾಗ್ದಾನ

Views: 1
ನಾವು ಕೊಟ್ಟ 5 ‘ಗ್ಯಾರಂಟಿ ‘ ಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲು ಬದ್ದ, ಅವುಗಳ ತ್ವರಿತ ಅನುಷ್ಠಾನ ನಮ್ಮ ಗುರಿ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಸಕಾ೯ರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆ ಪೂವ೯ದಲ್ಲಿ ನೀಡಿದ ಆಶ್ವಾಸನೆಗಳನ್ನು ಆಧ್ಯತೆ ಮೇಲೆ ಈಡೇರಿಸಿ, ಜನರ ವಿಶ್ವಾಸ ಉಳಿಸಿ ಕೊಳ್ಳಲಾಗುವುದು ಇದುವೇ ನಮ್ಮ ಗ್ಯಾರಂಟಿ, ಜನರ ವಿಶ್ವಾಸದ ಬೆಂಬಲ ಮತ್ತು ಉತ್ಸಾಹ ಮುಂದುವರಿಯ ಬೇಕಾದರೆ ಇದು ಅತ್ಯಗತ್ಯ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಶನಿವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾಯ೯ದಶಿ೯ ಕೆ. ಸಿ. ವೇಣುಗೋಪಾಲ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುಜೇ೯ವಾಲ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖಗೆ೯,ಡಿ.ಕೆ.ಶಿವಕುಮಾರ್ ಮುಂತಾದ ರಾಜ್ಯ ಮತ್ತು ರಾಷ್ಟ್ರದ ನಾಯಕರು ಉಪಸ್ಥಿತರಿದ್ದರು.






