ಜನಮನ
ಮಾಲಾಡಿಯಲ್ಲಿ ಚಿರತೆ ಬೋನಿನಲ್ಲಿ ಸೆರೆ

Views: 0
ಕುಂದಾಪುರ : ತಾಲೂಕಿನ ತೆಕ್ಕಟ್ಟೆ ಸಮೀಪ ಮಾಲಾಡಿಯಲ್ಲಿ ಹಲವು ದಿನಗಳಿಂದ ಚಿರತೆ ದಾಳಿಯಿಂದ ಭಯಭೀತಿ ಹುಟ್ಟಿಸಿದ ಚಿರತೆ ಶುಕ್ರವಾರ ಬೋನಿನಲ್ಲಿ ಸೆರೆಯಾಗಿದೆ
2018 ರಿಂದ ಇಲ್ಲಿಯವರೆಗೆ ಇದೇ ಪರಿಸರದಲ್ಲಿ 7 ಚಿರತೆಗಳು ಬೋನಿಗೆ ಬಿದ್ದಿದೆ. ಇದೀಗ ಒಂದೇ ವಷ೯ದಲ್ಲಿ 4ನೇ ಚಿರತೆ ಸೆರೆಯಾಗಿದೆ. ಇಲ್ಲಿನ ವಕ್ವಾಡಿ, ಹೂವಿನಕೆರೆ, ಉಳ್ತೂರು, ಕೆದೂರು ಮಾಲಾಡಿ ಪರಿಸರದಲ್ಲಿ ನಿರಂತರವಾಗಿ ಸಾಕು ನಾಯಿ, ದನ ಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ, ಮನುಷ್ಯರ ಮೇಲಿನ ದಾಳಿಗೆ ಹೆದರಿದ ಜನರು ಕತ್ತಲಾಗುತ್ತಾ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಬೆಳಿಗ್ಗೆ ವಾಕಿಂಗ್ ಹೋಗುದನ್ನು ನಿಲ್ಲಿಸಿದ್ದರು. ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸೆರೆಸಿಕ್ಕ ಚಿರತೆಯನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಅಭಿನಂದಿಸಿದರು.








