ಕರಾವಳಿ
ಬ್ರಹ್ಮಾವರದ ಸಮೀಪ ರಸ್ತೆ ಅಪಘಾತ: ಪೇತ್ರಿಯ ಪತ್ರಿಕಾ ವಿತರಕ ದುರ್ಮರಣ

Views: 99
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕಿನ ಚಾಂತಾರು ಸಮೀಪ ಇಂದು ಬೈಕ್ ಮತ್ತು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪತ್ರಿಕಾ ವಿತರಕ ಬಾಲಚಂದ್ರ ಶೆಟ್ಟಿ (61) ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪೇತ್ರಿಯವರಾದ ‘ಬಾಲಣ್ಣ’ ಎಂದೇ ಪ್ರಖ್ಯಾತಿ ಹೊಂದಿದ್ದ ಬಾಲಚಂದ್ರ ಶೆಟ್ಟಿಯವರು ತಮ್ಮ ಪತ್ನಿಯ ಮನೆಯಿಂದ ಪೇತ್ರಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಚಾಂತಾರು ಸಮೀಪ ಕಾರು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಧಾರ್ಮಿಕ ಮತ್ತು ಭಜನಾ ಮಂಡಳಿಗಳಲ್ಲಿ ಸಕ್ರಿಯರಾಗಿ, ಕನ್ನಾರು ಭಜನಾ ಮಂಡಳಿಯ ಮುಂದಾಳಾಗಿದ್ದ ಬಾಲಚಂದ್ರ ಶೆಟ್ಟಿಯವರು ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.