ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ವಿಶ್ವ ಪರಿಸರ ದಿನಾಚರಣೆ, ಪುಟಾಣಿಗಳಿಂದ ಪರಿಸರ ಜಾಗೃತಿ ಸಂದೇಶ

Views: 172

ಕನ್ನಡ ಕರಾವಳಿ ಸುದ್ದಿ :  ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಿಂಡರ್ ಗಾರ್ಟನ್ ವಿಭಾಗದ ಮಕ್ಕಳು ಗಿಡ ನೆಡುವುದರ ಮೂಲಕ ಸುಂದರವಾಗಿ ಶುಭಾರಂಭವಾಯಿತು. ಮುಗ್ಧ ಪುಟಾಣಿಗಳ ಹಸ್ತಗಳಿಂದ ನೆಡಲಾದ ಗಿಡಗಳು ಪರಿಸರ ಉಳಿವಿನ ಬಗ್ಗೆ ಬಲವಾದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ಮಕ್ಕಳಿಗೆ ಪ್ರೇರಣಾದಾಯಕವಾಗಿ ಮಾತನಾಡುತ್ತಾ,”ಗಿಡ ಎಂದರೆ ಜೀವ. ಒಂದು ಗಿಡವನ್ನು ನೆಡುವುದು, ಭವಿಷ್ಯಕ್ಕಾಗಿ ಜೀವವೊಂದನ್ನು ಉಳಿಸುವಂತದ್ದು. ಇಂದಿನ ಪುಟಾಣಿಗಳು ಪರಿಸರದ ಮಹತ್ವವನ್ನು ಅರ್ಥಮಾಡಿಕೊಂಡು ತಮ್ಮ ಕೈಗಳಿಂದ ಗಿಡ ನೆಡುವುದು ನಿಜಕ್ಕೂ ಸಂತಸದ ವಿಷಯ. ಇಂತಹ ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಜವಾಬ್ದಾರಿಯುತ ಭಾವನೆ ಮೂಡುವುದು ನಮ್ಮ ಭವಿಷ್ಯ ಪೀಳಿಗೆಗೆ ದೊಡ್ಡ ಕೊಡುಗೆಯಾಗಲಿದೆ.”ಎಂದು ಮಕ್ಕಳಿಗೆ ಪರಿಸರದ ಕಾಳಜಿಯನ್ನು ಜಾಗೃತಿಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪ, ಆಡಳಿತಾಧಿಕಾರಿ ಶ್ರೀಮತಿ ಆಶಾ ಶೆಟ್ಟಿ, ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಶ್ವೇತಾ ನಿರ್ವಹಿಸಿದರು. ಶಿಕ್ಷಕಿ ಗಗನ ವಂದನಾರ್ಪಣೆಯನ್ನು ಸಲ್ಲಿಸಿದರು.

Related Articles

Back to top button