ರಾಜಕೀಯ
ನನ್ನನ್ನು ಸೇರಿ 13 ಸಂಸದರ ತೇಜೋವಧೆಗೆ ಯತ್ನ : ಡಿ.ವಿ. ಸದಾನಂದ ಗೌಡ

Views: 0
ಪಕ್ಷದ 13 ಮಂದಿ ಸಂಸದರ ತೇಜೋವಧೆ ಮಾಡುವ ಪ್ರಯತ್ನಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದರು.
ಪಕ್ಷದ ಚುನಾವಣೆಯಲ್ಲಿ ಸೋತಿರುವುದಕ್ಕೆ ನೆಪಮಾಡಿಕೊಂಡು ಮನೋಸ್ದೈಯ೯ ಕುಗ್ಗಿಸುವ ಕೆಲಸ ನಡೆದಿದೆ, ಈ ರೀತಿಯ ಸುದ್ಧಿಯನ್ನು ಹರಿದು ಬಿಟ್ಟವರು ಯಾರಂತ ಗೊತ್ತಿಲ್ಲ, 13 ಮಂದಿ ಕೆಲಸ ಮಾಡಿಲ್ಲ ಲೋಕ ಸಭೆಯಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ವ್ಯಾಖ್ಯಾನ ನಡೆಸಲಾಗಿದೆ. ಈ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಬೇಕಾದವರು ಯಾರೂ ಮಾತನಾಡುತ್ತಿಲ್ಲ ಆದಷ್ಟು ಬೇಗ ಸ್ಪಷ್ಟನೆ ನೀಡಬೇಕು ಎಂದು ಸದಾನಂದ ಗೌಡ ಹೇಳಿದ್ದಾರೆ.
ಅನಂತ್ ಕುಮಾರ್ ಈಶ್ವರಪ್ಪ ಸೇರಿ ಎಲ್ಲರನ್ನೂ ಒಟ್ಟಿಗೆ ಸೇರಿ ಕರೆದೊಯ್ಯುವ ಕೆಲಸ ಮಾಡಿದ್ದೇವೆ, ಇವರೆಲ್ಲರೂ ನನಗೆ ಮಾಗ೯ದಶ೯ಕರು, ಈಗ ನನ್ನ ಮನೋಬಲ ಕುಗ್ಗಿಸುವ ಕೆಲಸ ನಡೆದಿದೆ ಎಂದು ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.






