ಜನಮನ
ಡಾ. ಗಣೇಶ್ ಗಂಗೊಳ್ಳಿ ಅವರಿಗೆ ಕನಾ೯ಟಕ ಯುವರತ್ನ -2023 ರಾಜ್ಯ ಪ್ರಶಸ್ತಿಗೆ ಆಯ್ಕೆ
Views: 0

ಕುಂದಾಪುರ :ದಿನಾಂಕ :05/03/2023 ಆದಿತ್ಯವಾರ ಶ್ರೀವಿದ್ಯಾಲಯ ಮತ್ತು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ , ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು, ಪುನರೂರು ಪ್ರತಿಷ್ಠಾನ ,ಹಾಗೂ ಪುನರೂರು dekoretrs ಇವರ ಸಹಭಾಗಿತ್ವದಲ್ಲಿ ನಡೆಯುವ 13 ನೆಯ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ, ನಾಡಿನ ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಸಂಗೀತ ಮತ್ತು ಸಂಘಟನಾ ಕ್ಷೇತ್ರದಲ್ಲಿನ 32 ವರ್ಷದ ಸೇವೆಯನ್ನು ಗುರುತಿಸಿ “”ಕರ್ನಾಟಕ ಯುವ ರತ್ನ- 2023 “”ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಡಾ.ಶೇಖರ್ ಅಜೆಕಾರು ಅವರು ತಿಳಿಸಿದ್ದಾರೆ






