ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣದ ಹಿಂದೆ ಸುಚಿತ್ರಾಳ ಖಾಸಗಿ ಕ್ಷಣದ ಫೋಟೋ ಬಯಲು!
Views: 148
ಕನ್ನಡ ಕರಾವಳಿ ಸುದ್ದಿ: ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾಳ ನೌಟಂಕಿ ಆಟ ಒಂದೊಂದೇ ಬಟಾಬಯಲಾಗುತ್ತಿದೆ. ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು. ಆತನೊಂದಿಗಿರುವ ಖಾಸಗಿ ಕ್ಷಣದ ಫೋಟೋ ಬಯಲಾಗಿದೆ.
ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು. ಸುಚಿತ್ರಾ ಹಣದ ದಾಹಕ್ಕೆ ಕಾರ್, ಬೈಕ್ಗಳನ್ನು ಉಡುಗೊರೆಯಾಗಿ ಕಮಲಾಕರ್ ಭಟ್ ನೀಡಿದ್ದ.
ಗಂಡ ಬೆಂಗಳೂರಿನಲ್ಲಿ ಹೋಟಲ್ ಒಂದರಲ್ಲಿ ಮ್ಯಾನೇಜರ್ ಆಗಿ ದುಡಿಯುತಿದ್ದರೆ ಈಕೆ ಸಿದ್ದಾಪುರದ ಗಂಡನ ಮನೆಯಲ್ಲಿ ಸಿಕ್ಕ ಸಿಕ್ಕ ಹುಡುಗರ ಜೊತೆ ಚಾಟಿಂಗ್ ಡಯಟಿಂಗ್ ಅನ್ನುತಿದ್ದಳು ಎಂಬ ವಿಚಾರ ಬಯಲಾಗಿದೆ.






