ಇತರೆ
ಜೆಸಿಬಿ ಹರಿದು ಗಾಢ ನಿದ್ರೆಯಲ್ಲಿದ್ದ ಮೂವರು ಸಾವು

Views: 10
ಜಾಲಹಳ್ಳಿ: ರಾಯಚೂರು ಜಿಲ್ಲೆ ಸಮೀಪ ನೀಲವಂಜಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕೊಳವೆ ಬಾವಿ ಕೊರೆಯುವ ಯಂತ್ರದಲ್ಲಿ ಕೆಲಸ ಮಾಡುವ ಮೂವರು ಯುವಕರು ಗಾಢ ನಿದ್ರೆಯಲ್ಲಿದ್ದಾಗ ಅವರ ಮೇಲೆ ಜೆಸಿಬಿ ಯಂತ್ರ ಹರಿದು ಸ್ಥಳದಲ್ಲಿಯೇ ಮೂವರು ಸಾವನಪ್ಪಿದ್ದಾರೆ.
ಮೃತಪಟ್ಟವರು ಕೃಷ್ಣ( 25) ಶಿವರಾಮ(30) ಬಲರಾಮ (28) ಎಂದು ಗುರುತಿಸಲಾಗಿದೆ.
ಬೋರ್ವೆಲ್ ಕೆಲಸ ಮಾಡಿಕೊಂಡು ಜಮೀನಿನಲ್ಲಿ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಜೀವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






