ರಾಜಕೀಯ
ಉಡುಪಿಗೆ ಕಾಂಗ್ರೆಸ್ ನಿಂದ ಪ್ರಸಾದ್ ರಾಜ್ ಕಾಂಚನ್

Views: 0
ಉಡುಪಿ : ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕೆಪಿಸಿಸಿ ಕಟ್ಟಡ ಸಮಿತಿಯ ಕಾರ್ಯಕಾರಿ ಸದಸ್ಯ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉಡುಪಿ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ.
ಎಂಬಿಎ ಪದವೀದರರಾಗಿರುವ ಇವರು ಬಹ್ಮಾವರ ಕ್ಷೇತ್ರದಿಂದ ಸ್ಪಧಿ೯ಸಿದ್ದ ಶ್ರೀಮತಿ ಸರಳಾ ಕಾಂಚನ್ ರವರ ಪುತ್ರ.
ಟಿಕೆಟ್ ಆಕಾಂಕ್ಷಿಗಳ ಅಸಮಧಾನ
ಉಡುಪಿಗೆ ಪ್ರಸಾದ್ ರಾಜ್ ಕಾಂಚನ್ ಹೆಸರು ಅಂತಿಮವಾಗುತ್ತಿದಂತೆ ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾಯ೯ ತಮ್ಮ ಬೆಂಬಲಿಗರ ಸಭೆ ನಡೆಸಿ, ಹೈಕಮಾಂಡ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಹುದ್ದೆಗೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪಧಿ೯ಸುವುದಾಗಿ ಹೇಳಿದ್ದಾರೆ.






