ಸಾಮಾಜಿಕ
ಮದುವೆಯಾದ ಮರುದಿನವೇ ಮದುಮಗ ಕುಸಿದು ಬಿದ್ದು ಸಾವು
Views: 75
ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಮರುದಿನವೇ ನವವಿವಾಹಿತ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಮೇಶ್ (30) ಸಾವನ್ನಪ್ಪಿದ ಯುವಕ. ಕಳೆದ ನವೆಂಬರ್ 30ರಂದು ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ವಿವಾಹಯಾಗಿತ್ತು.
ರಮೇಶ್ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದರು. ಬಳಿಕ ಮರುದಿನ ವಧುವಿನ ಮನೆಗೆ ಆರಕ್ಷತೆಗಾಗಿ ಹೋಗಿದ್ದರು.ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಯುವಕ ಕೊನೆಯುಸಿರು.ಈ ವೇಳೆ, ಗ್ರಾಮದ ದೇವಾಲಯದಿಂದ ವಧುವಿನ ಮನೆಯ ತನಕ ನವವಿವಾಹಿತರ ಮೆರವಣಿಗೆ ನಡೆಸಲಾಗಿತ್ತು. ನಂತರ ವಧುವಿನ ಮನೆಯ ದೇವರ ಮನೆಯಲ್ಲಿ ಕೈ ಮುಗಿಯುವಾಗಲೇ ರಮೇಶ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ರಮೇಶ್ ಕೊನೆಯುಸಿರೆಳೆದಿದ್ದರು. ರಮೇಶ್ ಸಾವಿನಿಂದ ನವವಧುವಿನ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.






