5 ವರ್ಷದ ಬಾಲಕಿಯನ್ನು ಕೊಂದು ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಚೆಲ್ಲಿದ ವ್ಯಕ್ತಿ!

Views: 100
ಕನ್ನಡ ಕರಾವಳಿ ಸುದ್ದಿ: ಗುಜರಾತ್ನ ಛೋಟಾಡೆಪುರ ಜಿಲ್ಲೆಯಲ್ಲಿ ಬೆಚ್ಚಬೀಳುವ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಿದ ವ್ಯಕ್ತಿಯೋರ್ವ ರಕ್ತವನ್ನು ದೇವಾಲಯದ ಮೆಟ್ಟಿಲುಗಳ ಮೇಲೆ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯ ಪನೆಜ್ ಗ್ರಾಮದಲ್ಲಿರುವ ಆಕೆಯ ಮನೆಯಿಂದ ಮೃತ ಬಾಲಕಿಯನ್ನು ಬೆಳಿಗ್ಗೆ ತಾಯಿಯ ಸಮ್ಮುಖದಲ್ಲಿ ಆರೋಪಿ ಲಾಲಾ ತಾದ್ರಿ ಅಪಹರಿಸಿದ್ದಾನೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಗೌರವ್ ಅಗ್ರವಾಲ್ ಹೇಳಿದ್ದಾರೆ.
ನಂತರ ಬಂಧನಕ್ಕೊಳಗಾದ ತಾದ್ವಿ, ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿ ಬಳಸಿ ಕುತ್ತಿಗೆಗೆ ಮಾರಣಾಂತಿಕ ಗಾಯಗಳನ್ನುಂಟುಮಾಡಿದನು ಎಂದು ಅಗ್ರವಾಲ್ ಹೇಳಿದ್ದಾರೆ.
“ಅವನು ಹುಡುಗಿಯ ಕುತ್ತಿಗೆಯಿಂದ ರಕ್ತವನ್ನು ಸಂಗ್ರಹಿಸಿ, ಅದರಲ್ಲಿ ಕೆಲವನ್ನು ತನ್ನ ಮನೆಯಲ್ಲಿರುವ ಒಂದು ಸಣ್ಣ ದೇವಾಲಯದ ಮೆಟ್ಟಿಲುಗಳ ಮೇಲೆ ಅರ್ಪಿಸಿದನು, ಅವಳ ತಾಯಿ ಮತ್ತು ಇತರ ಕೆಲವು ಗ್ರಾಮಸ್ಥರು ಆಘಾತದಿಂದ ನೋಡುತ್ತಿದ್ದರು. ಆದರೆ, ಅವನು ಕೊಡಲಿಯನ್ನು ಹಿಡಿದಿದ್ದರಿಂದ ಎಲ್ಲರೂ ಭಯಗೊಂಡಿದ್ದರು” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಬಾಲಕಿಯ ಕುಟುಂಬದ ದೂರಿನಲ್ಲಿ, ಕೊಲೆ ಮತ್ತು ಅಪಹರಣಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯಾಯಾ ಸಂಹಿತಾ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಅಗ್ರವಾಲ್ ಮಾಹಿತಿ ನೀಡಿದ್ದಾರೆ.






