ಯುವಜನ
ಜೆಸಿಐ ಕುಂದಾಪುರ ಸಿಟಿಗೆ ಅತ್ಯುತ್ತಮ ಘಟಕ ಪ್ರಶಸ್ತಿ

Views: 0
ಕುಂದಾಪುರ: ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ ಆಶ್ರಯದಲ್ಲಿ ನಡೆದ ವಲಯ ಮಧ್ಯಂತರ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿ, ಜೊತೆಗೆ ರನ್ನರ್ಸ್ ಆಪ್ ಅಧ್ಯಕ್ಷ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಪಡೆದುಕೊಂಡಿದೆ.
ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಪ್ರಶಸ್ತಿ ನೀಡಿದರು. ವಲಯ ಉಪಾಧ್ಯಕ್ಷ ಅಭಿಲಾಷ್, ಜಯಶ್ರೀ, ರಾಷ್ಟ್ರೀಯ ಸಂಯೋಜಕ ಕೆ .ಕಾರ್ತಿಕೇಯ ಮಧ್ಯಸ್ಥ, ಪೂರ್ವ ವಲಯ ಅಧ್ಯಕ್ಷೆ ಸೌಜನ್ಯ ಹೆಗಡೆ, ಘಟಕದ ಅಧ್ಯಕ್ಷೆ ಡಾ. ಸೋನಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ,ಪೂರ್ವ ಅಧ್ಯಕ್ಷರಾದ ಶ್ರೀಧರ್ ಸುವರ್ಣ, ಗಿರೀಶ್ ಹೆಬ್ಬಾರ್, ನಾಗೇಶ್ ನಾವಡ, ವಿಜಯ ಭಂಡಾರಿ, ಜೆಸಿರೇಟ್ ಪೂರ್ವ ಅಧ್ಯಕ್ಷೆ ಚಂದ್ರಿಕಾ ಕಾಮತ್ ಇನ್ನಿತರರು ಇದ್ದರು.






