ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘ: ವಾರ್ಷಿಕ ಮಹಾಸಭೆ,ನೂತನ ಕಚೇರಿ ಉದ್ಘಾಟನೆ

Views: 97
ಕನ್ನಡ ಕರಾವಳಿ ಸುದ್ದಿ: ಬಂಧುಗಳು ತಮ್ಮ ಮಕ್ಕಳ ಶಿಕ್ಷಣ, ಉನ್ನತ ಶಿಕ್ಷಣದತ್ತ ಹೆಚ್ಚಿನ ಒತ್ತು ನೀಡಬೇಕು ಆ ಮೂಲಕ ತಮ್ಮ ಬದುಕನ್ನು ಸದೃಡಗೊಳಿಸಿಕೊಳ್ಳಬೇಕು, ಸಮುದಾಯದ ಸಂಘಟನೆಯ ಮೂಲಕ ಸಮಾಜಮುಖಿ ಸೇವೆಗಳು ನಡೆಯುವುದರ ಜೊತೆಗೆ ಕೊಡುಗೆಗಳು ಸಂಘಟನೆಗೆ ದೊರೆತಾಗ ಮಾತ್ರ ಸಂಸ್ಥೆ ಸದೃಢವಾಗಿ ಬೆಳೆತಯಲು ಸಾಧ್ಯ ಎಂದು ಹೆಬ್ರಿ ತಹಶೀಲ್ದಾರ್ ಎಸ್ .ಎ.ಪ್ರಸಾದ್ ಹೇಳಿದರು.
ಅವರು ಮುದ್ರಾಡಿಯಲ್ಲಿ ನಡೆದ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಮಹಿಳಾ ಹಾಗೂ ಯುವ ವೇದಿಕೆಯ ವತಿಯಿಂದ ನಡೆದ 2ನೇ ವರ್ಷದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಬಳಿಕ ಮುದ್ರಾಡಿ ಪೇಟೆಯಲ್ಲಿ ನಿರ್ಮಾಣಗೊಂಡ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ವಾರ್ಷಿಕ ಮಹಾಸಭೆಯನ್ನು ಮಂಗಳೂರು ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷ ರತ್ನಾಕರ ಶೆಟ್ಟಿಗಾರ್ ಉದ್ಘಾಟಿಸಿದರು.
ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಜಯರಾಮ ಶೆಟ್ಟಿಗಾರ್ ಮಾತನಾಡಿ, ಸಂಘಟನೆ ಸಹಕಾರದೊಂದಿಗೆ ದೈವಾನುಗ್ರಹ ಇದ್ದಲ್ಲಿ ಒಂದು ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿಗಾರ್ ಮಾತನಾಡಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು. ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳು, ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಹೆಬ್ರಿ ಎಸ್ ಆರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಭಿಜ್ಞಾ ಶೆಟ್ಟಿಗಾರ್ ಸಹಿತ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿಜಯ ಕುಮಾರ್ ಮುದ್ರಾಡಿ, ಹಿರಿಯರಾದ ನಿವೃತ್ತ ಮೆಸ್ಕಾಂ ಉದ್ಯೋಗಿ ಮುನಿಯಾಲು ವಿಟ್ಟಲ ಶೆಟ್ಟಿಗಾರ್, ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ಸುರೇಶ ಶೆಟ್ಟಿಗಾರ್, ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೋಕೇಶ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಜತೆ ಕಾರ್ಯದರ್ಶಿ ಅಶ್ವಿನಿ ಮುದ್ರಾಡಿ, ಕೋಶಾಧಿಕಾರಿ ಸದಾಶಿವ ಶೆಟ್ಟಿಗಾರ್ ಉಪಸ್ಥಿತರಿದ್ದರು.
ದೀಪಾಶ್ರೀ ವರದಿ ಮಂಡಿಸಿದರು. ಸದಾಶಿವ ಶೆಟ್ಟಿಗಾರ್ ಲೆಕ್ಕಪತ್ರ ಮಂಡಿಸಿದರು. ಶಶಿಕಲಾ ಸ್ವಾಗತಿಸಿ, ಪ್ರಸನ್ನ ಶೆಟ್ಟಿಗಾರ್ ನಿರೂಪಿಸಿ, ರಾಘವೇಂದ್ರ ಶೆಟ್ಟಿಗಾರ್ ವಂದಿಸಿದರು.