ಸಾಂಸ್ಕೃತಿಕ

ನೀಲಾವರದಲ್ಲಿ 5 ದಿನಗಳ ಕ್ರೋಶ ಸೀರೆ ಕುಚ್ಚು ತರಬೇತಿ ಉದ್ಘಾಟನೆ

Views: 119

ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ನೀಲಾವರ ಮೂಕಾಂಬಿಕಾ ಸಂಜೀವಿನಿ ಒಕ್ಕೂಟ ನೀಲಾವರ ಇವರ ಆಯೋಜನೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣ ನೀಲಾವರದಲ್ಲಿ 5 ದಿನಗಳ ಕ್ರೋಶ ಸೀರೆ ಕುಚ್ಚು ತರಬೇತಿಯ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯರು ವಿಜಯ ಗ್ರಾಮೀಣ ಪ್ರತಿಷ್ಠಾನದ ಸಕ್ರೀಯ ಕಾರ್ಯದರ್ಶಿ ರಾಜೇಂದ್ರ ರೈ, ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್, ಪಂಚಾಯತ್ ಅಧ್ಯಕ್ಷರು ಬೇಬಿ, ಪಿಡಿಓ ಗೀತಾ ಬಾಳಿಗ, ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು,ಎನ್ ಆರ್ ಎಲ್ ಎಮ್ ವ್ಯವಸ್ಥಾಪಕಿ ಸ್ವಾತಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಆಶಾ ಮಕ್ಕಿತ್ತಾಯ ತರಬೇತುದಾರರಾದ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭಹಾರೈಸಿದರು.

ಆಶಾ ಮಕ್ಕಿತ್ತಾಯ ಪ್ರಾರ್ಥಿಸಿದರು. ಮಮತಾ ಸ್ವಾಗತಿಸಿದರು. ನಾಗರತ್ನ ನಿರೂಪಿಸಿದರು. ಆಶಾ ವಂದಿಸಿದರು. ಒಟ್ಟು 30 ಜನ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button
error: Content is protected !!