ಆರ್ಥಿಕ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಣೇಶ ದೇವಾಡಿಗರಿಗೆ ಮಾನವೀಯ ನೆರವು ನೀಡಿ….

Views: 556

ಕನ್ನಡ ಕರಾವಳಿ ಸುದ್ದಿ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ನಿವಾಸಿಯಾಗಿರುವ ಗಣೇಶ ದೇವಾಡಿಗ ಇವರು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆ ಆಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿದ್ದು ಈಗಾಗಲೇ ತುಂಬಾ ಹಣ ಖರ್ಚಾಗಿದ್ದು, ಇನ್ನು ಚಿಕಿತ್ಸೆಗೆ ಅಂದಾಜು 15 ಲಕ್ಷ ಬೇಕಾಗಿದ್ದು ಮನೆಯಲ್ಲಿ ಕಡುಬಡತನವಿರುವುದರಿಂದ ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಕುಟುಂಬಕ್ಕೆ ತುಂಬಾ ಕಷ್ಟವಾಗಿದ್ದು ಸಹೃದಯಿ ದಾನಿಗಳು ಗಣೇಶರವರ ಚಿಕಿತ್ಸೆಗೆ ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಎಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಚಿಕಿತ್ಸೆಗೆ ಹಣ ಖರ್ಚಾಗಿದೆ.ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ಧನ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಆರ್ಥಿಕ ಸಹಾಯಕ್ಕಾಗಿ;

Related Articles

Back to top button