ಶಿರೂರು: ಜ್ಞಾನದ ಶಿಕ್ಷಣ ಸಂಸ್ಥೆಯಲ್ಲಿ “ವಿಶ್ವ ಪರಿಸರ ದಿನಾಚರಣೆ”
"ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ ನೆಟ್ಟು ನೀರು ಹಾಕಿ ಅವುಗಳನ್ನು ಬೆಳೆಸಿ ಪೋಷಿಸಬೇಕಾಗಿದೆ, ಪರಿಸರದ ಮೌಲ್ಯಗಳನ್ನು ಎಲ್ಲರೂ ಅರಿತುಕೊಂಡು ಮಲೀನ ಮಾಡದಂತೆ ಸಂರಕ್ಷಣೆ ಮಾಡುವತ್ತ ಶ್ರಮವಹಿಸಬೇಕು"---ಹರ್ಷ, ಬೈಂದೂರು ಅರಣ್ಯ ಉಪ ಸಂರಕ್ಷಣಾಧಿಕಾರಿ
ಕನ್ನಡ ಕರಾವಳಿ ಸುದ್ದಿ: ಪರಿಸರ ಉಳಿದರೆ ಮನುಕುಲದ ಉಳಿವು, ಪ್ರಕೃತಿ ವಿನಾಶದತ್ತ ಸಾಗಿದರೆ ಮನುಕುಲದ ರಕ್ಷಣೆ ಅಸಾಧ್ಯ, ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಇದನ್ನು ನಮಗೆಲ್ಲ ನೆನಪಿಸುವ ದಿನವೇ *ವಿಶ್ವ ಪರಿಸರ ದಿನ* ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ ನೆಟ್ಟು ನೀರು ಹಾಕಿ ಅವುಗಳನ್ನು ಬೆಳೆಸಿ ಪೋಷಿಸಬೇಕಾಗಿದೆ, ಪರಿಸರದ ಮೌಲ್ಯಗಳನ್ನು ಎಲ್ಲರೂ ಅರಿತುಕೊಂಡು ಮಲೀನ ಮಾಡದಂತೆ ಸಂರಕ್ಷಣೆ ಮಾಡುವತ್ತ ಶ್ರಮವಹಿಸಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರು ಅರಣ್ಯ ಉಪ ಸಂರಕ್ಷಣಾಧಿಕಾರಿ ಹರ್ಷ ವಿ ತಿಳಿಸಿ, ಸಾಂಕೇತಿಕವಾಗಿ ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇನ್ನೊರ್ವ ಅತಿಥಿ ಶ್ರೀಮತಿ ಶ್ರುತಿ ಗೌಡ ಬೀಟ್ ಫಾರೆಸ್ಟರ್ ಬೈಂದೂರು ಇವರು ಮಾತನಾಡಿ, ಇಂದಿನ ದಿನಗಳಲ್ಲಿ ಪರಿಸರ ನಾಶವಾಗುತ್ತಿದ್ದು, ಇದರ ಪರಿಣಾಮವಾಗಿ ಕಾಲ ಕಾಲಕ್ಕೆ ಮಳೆಯಿಲ್ಲದೆ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಕೃಷಿಕರು ಕೃಷಿಯಿಂದ ವಂಚಿತರಾಗುತ್ತಿದ್ದಾರೆ ಹೀಗಾಗಿ ಇಂದಿನ ದಿನಗಳಲ್ಲಿ ಪರಿಸರ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಪರಿಸರವನ್ನು ಸಂರಕ್ಷಿಸಿದರೆ ಉತ್ತಮವಾದ ವಾತಾವರಣ ದೊರಕುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಹಾಗೂ ಸುಂದರ ಪ್ರಕೃತಿಯನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾlರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಞಾನದಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಧೀರಜ್ ಬಿ, ಬೈಂದೂರು, ಬೀಟ್ ಫಾರೆಸ್ಟರ್ ಶಂಕರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೈಂದೂರು ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ಪೂರೈಸಿ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದರು.
ಶಿಕ್ಷಕಿಯರಾದ ಶ್ರೀಮತಿ ಸಿಜಿ ಸ್ವಾಗತಿಸಿದರು. ಕುಮಾರಿ ನವ್ಯ ವಂದಿಸಿದರು. ಕುಮಾರಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.