ಸಾಂಸ್ಕೃತಿಕ

ತೀವ್ರ ಅನಾರೋಗ್ಯದ ಕಾರಣ; ಜೈಲಿನಿಂದ ನಟ ದರ್ಶನ್‌ ಬಿಡುಗಡೆ ?

Views: 337

ಬೆಂಗಳೂರು, ನಟ ದರ್ಶನ್ ಆಂಡ್‌ ಗ್ಯಾಂಗ್‌ ಜೈಲು ಸೇರಿ ಬರೋಬ್ಬರು ನಾಲ್ಕು ತಿಂಗಳು ಕಳೆದಿದ್ದು,  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾದ  ವಿಶ್ವಜೀತ್ ಶೆಟ್ಟಿ ಅವರ ಪೀಠದಲ್ಲಿ ನಡೆಯಿತು.

ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಬಳ್ಳಾರಿ ಆಸ್ಪತ್ರೆಗೆ ದರ್ಶನ್ ಅವರಿಗೆ ಎಂಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿಸಲಾಗುದ್ದು, ನಟ ದರ್ಶನ್ ಅವರ ಬೆನ್ನಿನ ಹಿಂಭಾಗದಲ್ಲಿ L5 ಹಾಗೂ S1ನಲ್ಲಿ ನೋವು ಕಂಡುಬಂದಿದೆ. ವೈದರ ವರದಿಯನ್ನು ಕೋರ್ಟ್‌ ಮುಂದೆ ಇಡಲಾಗಿದೆ.

2022 ರಿಂದ 2023 ರಲ್ಲಿಯೂ ಈ ಬಗ್ಗೆ ಚಿಕಿತ್ಸೆ ಪಡೆಯಲಾಗಿದೆ. ಬೆನ್ನು ಹುರಿಯ ಸಮಸ್ಯೆಯಿಂದ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೆ ಮುಂದುವರೆದರೆ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ದರ್ಶನ್‌ ಪರ ವಕೀಲರಾದ ಸಿ ವಿ ನಾಗೇಶ್ ಅವರು ವಾದ ಮಂಡಿಸಿದ್ದಾರೆ.

ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗುವುದಿಲ್ಲ. ಶಸ್ತ್ರಚಿಕಿತ್ಸೆಯಿಂದ ಮಾತ್ರವೇ ಈ ಸಮಸ್ಯೆ ಗುಣಪಡಿಸಬಹುದಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಹೀಗಾಗಿ ಅನಾರೋಗ್ಯದ ಕಾರಣ ಇಂದು(ಮಂಗಳವಾರ) ನಟ ದರ್ಶನ್‌ ಅವರಿಗೆ ಜಮೀನು ಸಿಗಲಿದ್ದು, ನಾಲ್ಕು ತಿಂಗಳ ಬಳಿಕ ನಟ ದರ್ಶನ್‌ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.ಎಂದು ತಿಳಿದುಬಂದಿದೆ.

Related Articles

Back to top button