ಬಗ್ವಾಡಿ ಮಹಿಷಾಸುರಮರ್ದಿನಿ ದೇವಳದ ಮ್ಯಾನೇಜರ್ ಬಚ್ಚು ಕುಂದರ್ ನಿಧನ

Views: 43
ಕುಂದಾಪುರ: ಶ್ರೀಮಹಿಷಾಸುರಮರ್ದಿನಿ ದೇವಸ್ಥಾನ ಬಗ್ವಾಡಿ, ಕುಂದಾಪುರ ಇಲ್ಲಿ ಸೇವೆ ಸಲ್ಲಿಸುತಿದ್ದ ದೇವಲ್ಕುಂದ ನಿವಾಸಿ ಬಚ್ಚು ಸಿ ಕುಂದರ್ (83) ಅವರು, ಅನಾರೋಗ್ಯದಿಂದ ದೈವಾದೀನರಾದರು .
ಮೃತರ ಪುತ್ರ,ಸೊಸೆ, ಮೊಮ್ಮಕ್ಕಳು, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿದ್ದ ಅವರು ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಪ್ರಾಮಾಣಿಕ ಸೇವಕರಾಗಿ,ಕೋಶಾಧಿಕಾರಿಯಾಗಿ ಮ್ಯಾನೇಜರ್ ಆಗಿ ಉಳಿತಾಯಕ್ಕೆ ಹೆಚ್ಚಿನ ಗಮನಹರಿಸಿ ದೇವಸ್ಥಾನದ ಸಂಪತ್ತು ಹೆಚ್ಚಿಸುವಲ್ಲಿ ದುಡಿದ ಮಹನೀಯರು ಇವರು .ಎಲ್ಲರನ್ನೂ ನಗುಮೊಗದಿಂದ ಬರಮಾಡಿಕೊಳ್ಳುತ್ತಾ ಭಕ್ತರಿಗೆ ದೇವಸ್ಥಾನದ ಬಗ್ಗೆ ಅಭಿಮಾನ ಮೂಡುವಂತೆ ಮಾಡುವಲ್ಲಿ ಯಶಸ್ವಿಯದವರು.ಮೊಗವೀರ ಮಹಾಜನ್ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಕೋಶಾಧಿಕಾರಿಯಾಗಿದ್ದರು.
ಸಮಾಜದ ಹಿರಿಯರಾದ ಬಚ್ಚು ಕುಂದರ್.ಅವರ ನಿಧನಕ್ಕೆ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಮುಂಬಯಿಯ ಮುಖ್ಯ ಕಛೇರಿಯ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.