ಯುವಜನ
ಬಂಟ್ವಾಳ :ಕಾಲೇಜು ವಿದ್ಯಾರ್ಥಿನಿ ಅಕಾಲಿಕ ಸಾವು

Views: 117
ಬಂಟ್ವಾಳ : ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಯೋರ್ವಳು ಅಕಾಲಿಕ ಮರಣವನ್ನಪ್ಪಿದ್ದಾಳೆ.
ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ(20) ಮೃತಪಟ್ಟ ಯುವತಿಯಾಗಿದ್ದಾಳೆ.
ರಕ್ಷಿತಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ, ನಿಧನರಾಗಿದ್ದಾರೆ. ಮೃತ ರಕ್ಷಿತಾ ಅವರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.