ಕರಾವಳಿ
ಕೋಟ: ಕಾವಡಿಯಲ್ಲಿ ಶಿಕ್ಷಕಿಯ ಮೇಲೆ ಹೆಜ್ಜೇನು ದಾಳಿ

Views: 162
ಕೋಟ: ಬ್ರಹ್ಮಾವರ ತಾಲೂಕಿನ ಕಾವಡಿ ಎಂಬಲ್ಲಿ ಹೆಜ್ಜೇನು ದಾಳಿಯಿಂದ ಶಾಲೆಯ ಶಿಕ್ಷಕಿಯೋರ್ವರು ಗಂಭೀರ ಗಾಯಗೊಂಡ ಘಟನೆ ಅ.28 ರಂದು ನಡೆದಿದೆ.
ಹೆಜ್ಜೇನು ದಾಳಿಗೊಳಗಾದ ಶಿಕ್ಷಕಿ ಚುಕ್ಕಿ ಎಂದು ತಿಳಿದುಬಂದಿದೆ. ಕಾವಡಿ ಸ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇಂದು ಮಧ್ಯಾಹ್ನ ಶಾಲೆಯಿಂದ ಮನೆಗೆ ಹೋಗಲು ನಡೆದು ಕೊಂಡು ಬರುತ್ತಿದ್ದ ಸಂದರ್ಭ ಕಾವಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಒಮ್ಮೆಲೆ ನೂರಾರು ಹೆಜ್ಜೇನುಗಳು ಶಿಕ್ಷಕಿ ಚುಕ್ಕಿಯವರ ಮೇಲೆ ದಾಳಿ ನಡೆಸಿವೆ
ಈ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ತನ್ನ ಜೀವದ ಹಂಗನ್ನು ತೊರೆದು ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಶಿಕ್ಷಕಿಯನ್ನು ತನ್ನ ಕಾರಿನಲ್ಲಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸರುತ್ತಾರೆ.
ಗಂಭೀರ ಗಾಯಗೊಂಡ ಶಿಕ್ಷಕಿ ಚುಕ್ಕಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.