ಇತರೆ

ಕಾಲು ಸಂಕ ದಾಟುವಾಗ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು

Views: 1

ಮಂಗಳೂರು:  ಕಾಲು ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರಣಚ ಗ್ರಾಮದಲ್ಲಿ ನಡೆದಿದೆ.

ಕೇಶವ ನಾಯಕ್ ಎಂ ( 51) ಮೃತಪಟ್ಟವರು. ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಬಳಿಯಲ್ಲಿರುವ ನೀರು ಹರಿಯುತ್ತಿರುವ ಚರಂಡಿಗೆ ಹಾಕಿರುವ ಕಾಲು ಸಂಕವನ್ನು ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಕಿವುಚಿ ಬಿದ್ದು ಮೇಲಕ್ಕೆ ಏಳಲು ಆಗದೆ ಮೃತಪಟ್ಟಿದ್ದಾರೆಎಂದು ತಿಳಿಯಲಾಗಿದೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button