ಆಸ್ತಿಗಾಗಿ ಹೆತ್ತಬ್ಬೆಯನ್ನು ಗೃಹ ಬಂಧನದಲ್ಲಿಟ್ಟ ಮಕ್ಕಳು!

Views: 154
ಆಸ್ತಿಗಾಗಿ, ಹಣ ಒಡವೆಗಾಗಿ ಹೆತ್ತ ತಾಯಿಯನ್ನೇ ಕಳೆದ 11 ತಿಂಗಳುಗಳಿಂದ ಮಕ್ಕಳು ಗೃಹಬಂಧನದಲ್ಲಿಟ್ಟ ಅಮಾನವೀಯ ಘಟನೆ ತುಮಕೂರಿನ ಶಿರಾ ಗೇಟ್ ಬಳಿ ನಡೆದಿದೆ. ನಿವೃತ್ತ ಸಿಡಿಪಿಓ ಆಗಿರುವ ಪಂಕಜಾಕ್ಷಿ (80) ಸಂತೃಸ್ಥೆ ತಾಯಿ. ಇದೀಗ ಸ್ಥಳೀಯರ ದೂರಿನ ಮೇರೆಗೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ತಾಯಿಯನ್ನು ಬಂಧನದಿಂದ ಬಿಡುಗಡೆಗೊಳಿಸಿದ್ದಾರೆ.
ಆಸ್ತಿ ವಿಚಾರವಾಗಿ ಕಳೆದ 11 ತಿಂಗಳಿನಿಂದ ಹೆತ್ತ ತಾಯಿಯನ್ನು ಮಗ ಮತ್ತು ಸೊಸೆ ದಿಗ್ಬಂಧನದಲ್ಲಿಟ್ಟಿರುವ ಅಮಾನವೀಯ ಘಟನೆ ಶಿರಾ ಗೇಟ್ ಸಾಡೆಪುರದಲ್ಲಿ ನಡೆದಿದೆ.
ನಿವೃತ್ತ ಸಿಡಿಪಿಓ ಆಗಿರುವ ಪಂಕಜಾಕ್ಷಿ (80) ಸಂತೃಸ್ಥೆ ತಾಯಿ.12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಪಂಕಜಾಕ್ಷಿ ಹಕ್ಕುದಾರರಾಗಿದ್ದಾರೆ.
ಈಗಾಗಲೇ ಇವರ ಬಳಿ ಇದ್ದ ಒಡವೆಗಳನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಮನೆಗಳನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ತಿಂಗಳಿಗೆ 50 ಸಾವಿರ ರೂ ಪಿಂಚಣಿ ಬರುತ್ತಿದ್ದು, ಆ ಹಣವನ್ನೂ ಮಕ್ಕಳು ಬಳಸಿಕೊಳ್ಳುತ್ತಿದ್ದರು. ಮನೆಯಲ್ಲೇ ಬೀಗ ಜಡಿದು ದಿಗ್ಬಂದನ ಮಾಡಿದ್ದರು ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ.ಈ ವಿಚಾರ ತಿಳಿದ ಸ್ಥಳೀಯರು ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವನ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ ವೃದ್ದೆಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರಕ್ಷಣೆ ನೀಡಿದ್ದಾರೆ.
ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದು, ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾರಿಗೆ ದೂರು ನೀಡಿದ್ದಾರೆ.
ವೃದ್ದೆಯನ್ನ ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟ ನ್ಯಾಯಾಧೀಶರು ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿ, ಮಕ್ಕಳಿಗೆ ತಾಯಿಯನ್ನ ಸರಿಯಾಗಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ನಾಲ್ವರು ಮಕ್ಕಳು ಒಪ್ಪಿಕೊಂಡಿದ್ದಾರೆ.